Advertisement

ಕೃಷ್ಣಾಪುರ: ಮಕ್ಕಳ ಚೈತನ್ಯ ಶಿಬಿರ ಉದ್ಘಾಟನೆ

06:01 PM Apr 10, 2019 | Team Udayavani |

ಮಹಾನಗರ: ಎಸ್‌ಪಿವೈಎಸ್‌ಎಸ್‌ ನಂದನೇಶ್ವರ ವಲಯದ ಯುವಕ ಮಂಡಲ ಕೃಷ್ಣಾಪುರ ಶಾಖೆಯಲ್ಲಿ ಮಕ್ಕಳ ಚೈತನ್ಯ ಶಿಬಿರ ಉದ್ಘಾಟನೆಗೊಂಡಿತು.

Advertisement

ಮುಖ್ಯ ಅತಿಥಿಯಾಗಿದ್ದ ಪಿ. ಸದಾ ಶಿವ ಐತಾಳ್‌ ಮಾತನಾಡಿ, ಚೈತನ್ಯ ಶಿಬಿರದಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆ ವಹಿಸಿದ್ದ ಎಸ್‌ಪಿವೈಎಸ್‌ಎಸ್‌ನ ಪದಾಧಿಕಾರಿ ರಾಮಕೃಷ್ಣ ಮಾತನಾಡಿ, ಮೊಬೈಲ್‌ ಬಳಕೆ ಮಕ್ಕಳನ್ನು ದಾರಿ ತಪ್ಪಿಸುತ್ತದೆ ಎನ್ನುತ್ತಾರೆ. ಆದರೆ ಉತ್ತಮ ಕೆಲಸ ಗಳಿಗೆ ಮೊಬೈಲ್‌ ಬಳಸುವುದರಿಂದ ಮಕ್ಕಳ ಜ್ಞಾನಾ ಭಿವೃದ್ಧಿಯೂ ಸಾಧ್ಯ. ಇಂತಹ ಕಾರ್ಯ ಕ್ರಮಗಳ ಮೂಲಕ ಮಕ್ಕಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸಲು ಅಡಿಪಾಯ ಹಾಕಿಕೊಟ್ಟಂತಾಗುತ್ತದೆ ಎಂದರು.

ಎಸ್‌ಪಿವೈಎಸ್‌ಎಸ್‌ನ ವೀರೇಶ್‌ ಪ್ರಸ್ತಾವನೆಗೈದರು. ಸುಧಾ ಸ್ವಾಗತಿಸಿದರು. ಶ್ರುತಿ ವಂದಿಸಿದರು. ಸಂಧ್ಯಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next