Advertisement

ಕೃಷ್ಣಪ್ಪ ಪ್ರಿಯಾಕೃಷ್ಣ ಮನೆ-ಮನೆ ಮತಯಾಚನೆ

03:03 PM May 02, 2018 | |

ಬೆಂಗಳೂರು: ಜಯನಗರ, ಗೋವಿಂದರಾಜ ನಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಗಳಾದ ಕೃಷ್ಣಪ್ಪ, ಪ್ರಿಯಾಕೃಷ್ಣರವರಿಗೆ ಮನೆ-ಮನೆ ಮತಯಾಚನೆ ಸಂದರ್ಭದಲ್ಲಿ ಅಭೂತ ಪೂರ್ವ ಬೆಂಬಲ ದೊರೆಯುತ್ತಿದೆ.

Advertisement

ಅಪ್ಪ-ಮಗ ಕ್ಷೇತ್ರಗಳಾಗಿರುವ ಇವು ಸಿದ್ದರಾಮಯ್ಯನವರ ಕಾಂಗ್ರೆಸ್‌ ನೇತೃತ್ವದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳಿಂದ ಮತದಾರರು ಮತ್ತೆ ಗೆಲುನ ಆರ್ಶೀವಾದ ನೀಡುವ ಎಲ್ಲಾ ಲಕ್ಷಣಗಳು ಗೋಚರವಾಗುತ್ತಿದೆ.

ಪ್ರಚಾರದ ಸಂದರ್ಭದಲ್ಲಿ ಆರತಿ ಎತ್ತಿ ಸಿಂಧೂರ – ತಿಲಕವಿಟ್ಟು ಜನಸಾಮಾನ್ಯರು ಬರಮಾಡಿಕೊಳ್ಳುತ್ತಿರುವುದು ಅಭ್ಯರ್ಥಿಗಳ ಮೇಲೆ ಇಟ್ಟಿರುವ ನಂಬಿಕೆ ಆತ್ಮಶ್ವಾಸ ಕಾರಣವಾಗಿದೆ. ಮೂರನೇ ಭಾರೀ ಗೆಲುನ ಶ್ರೀರಕ್ಷೆಗೆ ನಿಂತಿರುವ ಕೃಷ್ಣಪ್ಪ ಪ್ರಿಯಾಕೃಷ್ಣರಿಗೆ ಎರಡು ಭಾರಿಯ ಚುನಾವಣೆಯ ಅನುಭವಗಳು ಗೆಲುಗೆ ಸಹಕಾರಿಯಾಗಲಿದೆ.

ಹ್ಯಾಟ್ರಿಕ್‌ ಗೆಲುಗಾಗಿ ಕಾಯುತ್ತಿರುವ ಇವರು ತಮ್ಮ ಜೀವನವನ್ನು ರಾಜಕೀಯಕ್ಕೆ ಮುಡಿಪಾಗಿಟ್ಟು ಜನಸೇವೆಗಾಗಿ ಜನಸೇವೆಯೇ ಜನಾರ್ಧನ ಸೇವೆ ಎಂಬಂತೆ ದುಡಿಯುತ್ತಿರುವುದೇ ಇವರ ಗೆಲುವಿನ ಗುಟ್ಟಾಗಿದೆ.

ಜನೋಪಕಾರಿಯಾಗಿ ದುಡಿಯುತ್ತಿರುವ ಇವರು ಈ ಭಾರೀ ಗೆದ್ದು ಬಂದರೆ ಇನ್ನಷ್ಟು ಸಾಮಾನ್ಯ ಜನರಿಗೆ ಅನುಕೂಲವಾಗಬಹುದು ಎಂಬ ನಿರೀಕ್ಷೆಯಲ್ಲಿ ಜನಸಾಮಾನ್ಯ ಕಾಯುತ್ತಿರುವಂತಿದೆ ?

Advertisement
Advertisement

Udayavani is now on Telegram. Click here to join our channel and stay updated with the latest news.

Next