Advertisement

ಕೃಷ್ಣಾ ನದಿ ತೆಪ್ಪ ದುರಂತ: ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರು ಶವವಾಗಿ ಪತ್ತೆ

02:52 PM Apr 21, 2022 | Team Udayavani |

ವಿಜಯಪುರ: ಜಿಲ್ಲೆಯ ಕೊಲ್ಹಾರ ಬಳಿಯ ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ಇಬ್ಬರು ಮೀನುಗಾರರ ಸಹೋದರರು ಗುರುವಾರ ಶವವಾಗಿ ಪತ್ತೆಯಾಗಿದ್ದಾರೆ.

Advertisement

ಮಂಗಳವಾರ ಸಂಜೆ ಬಿರುಗಾಳಿ ಬೀಸಿದ್ದರಿಂದ ಕೃಷ್ಣಾ ನದಿಯಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತೆಪ್ಪ ನದಿನೀರಲ್ಲಿ ಮಗುಚಿ ಬಿದ್ದಿತ್ತು. ಇದೀಗ ಈ ದುರಂತದಲ್ಲಿ ನಾಪತ್ತೆಯಾಗಿದ್ದ ಅಣ್ಣ-ತಮ್ಮ ಶವವಾಗಿ ಪತ್ತೆಯಾಗಿದ್ದಾರೆ.

ತೆಪ್ಪದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬಳೂತಿ ಗ್ರಾಮದ ಮಳಿಯಪ್ಪ ದಳವಾಯಿ ಇವರ ಪುತ್ರರಾದ 24 ವರ್ಷದ ಬಸವರಾಜ, 20 ವರ್ಷದ ಅಜಿತ್ ಮೃತಪಟ್ಟವರು.

ಇದನ್ನೂ ಓದಿ:ಮುಸುಂಬಿ ಕೃಷಿಯಲ್ಲಿ ಯಶಸ್ಸು ಕಂಡ ಕುಷ್ಟಗಿಯ ಪ್ರಗತಿಪರ ರೈತ: ವಿದೇಶಕ್ಕೂ ರಫ್ತಾಗುತ್ತಿದೆಯಂತೆ

ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮೀನುಗಾರರ ಸಹಾಯದಿಂದ ನಿರಂತರ ಶೋಧದ ಬಳಿಕ ಇಬ್ಬರು ಸಹೋದರರ ಶವಗಳು ಕೃಷ್ಣಾ ನದಿಯ ಬಳೂತಿ ಜಾಕ್ ವೆಲ್ ಬಳಿ ಪತ್ತೆಯಾಗಿವೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next