Advertisement

ಕೇರಳದ ಪ್ರಥಮ ಕಂದಾಯ ಸಚಿವೆ, ಕಮ್ಯೂನಿಷ್ಟ್ ನಾಯಕಿ ಕೆಆರ್ ಗೌರಿ ವಿಧಿವಶ

01:14 PM May 11, 2021 | Team Udayavani |

ನವದೆಹಲಿ: ಕೇರಳ ರಾಜ್ಯದ ಮೊದಲ ಕಂದಾಯ ಸಚಿವೆ, ಹಿರಿಯ ರಾಜಕಾರಣಿ ಕೆಆರ್ ಗೌರಿ(102ವರ್ಷ) ಮಂಗಳವಾರ(ಮೇ 11) ಬೆಳಗ್ಗೆ ವಿಧಿವಶರಾಗಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

ರಾಜ್ಯದಲ್ಲಿ ಗೌರಿ ಅಮ್ಮ ಎಂದೇ ಜನಪ್ರಿಯರಾಗಿದ್ದರು. ಇಂದು ಬೆಳಗ್ಗೆ ತಿರುವನಂತಪುರಂನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ವರದಿ ತಿಳಿಸಿದೆ. ತಮ್ಮ ಜೀವನದುದ್ದಕ್ಕೂ ಹೋರಾಟವನ್ನೇ ಬದುಕನ್ನಾಗಿ ಮಾಡಿಕೊಂಡವರು ಗೌರಿ ಅಮ್ಮ.

ಕೇರಳದಲ್ಲಿನ ಕಮ್ಯುನಿಷ್ಟ್ ಚಳವಳಿಯ ಸ್ಥಾಪಕ ಸದಸ್ಯರಲ್ಲಿ ಗೌರಿ ಅಮ್ಮ ಕೂಡಾ ಒಬ್ಬರಾಗಿದ್ದಾರೆ. ಜ್ವರ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಗೌರಿ ಅಮ್ಮನನ್ನು ಏಪ್ರಿಲ್ 22ರಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇವರನ್ನು ಪರೀಕ್ಷೆಗೊಳಪಡಿಸಿದ್ದ ಸಂದರ್ಭದಲ್ಲಿ ಕೋವಿಡ್ ನೆಗೆಟಿವ್ ವರದಿ ಬಂದಿರುವುದಾಗಿ ತಿಳಿಸಿದೆ.

1957ರಲ್ಲಿ ಇಎಂಎಸ್ ನಂಬೂದಿರಿಪಾಡ್ ನೇತೃತ್ವದ ಕಮ್ಯೂನಿಷ್ಟ್ ಸರ್ಕಾರ ಅಧಿಕಾರಕ್ಕೆ ಬಂದಾಗ ಕೆಆರ್ ಗೌರಿ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next