Advertisement

ಕೆಪಿಟಿಸಿಎಲ್‌ ಪ್ರಶ್ನೆ ಪತ್ರಿಕೆ ಸೋರಿಕೆ; ಮತ್ತೊಬ್ಬ ಸೆರೆ

10:50 PM Dec 14, 2022 | Team Udayavani |

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕ ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆಯನ್ನು ವಾಟ್ಸ್‌ಆ್ಯಪ್‌ ಮೂಲಕ ಸೋರಿಕೆ ಮಾಡಿ ಹಾಗೂ ಇನ್ನುಳಿದವರಿಗೆ ಎಲೆಕ್ಟ್ರಾನಿಕ್‌ ಡಿವೈಸ್‌ ತಲುಪಿಸಿದ್ದ ಪ್ರಮುಖ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

Advertisement

ರಾಯಬಾಗ ತಾಲೂಕಿನ ಕೋಳಿಗುಡ್ಡ ಗ್ರಾಮದ ಸೋಮನಗೌಡ ಶಂಕರಗೌಡ ಪಾಟೀಲ(36) ಬಂಧಿತನಾಗಿದ್ದು, ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.

ಇನ್ನುಳಿದ ಆರೋಪಿಗಳಿಂದ ಪಡೆದಿದ್ದ 4.50 ಲಕ್ಷ ರೂ. ಹಣವನ್ನು ಗದಗ ಮುನ್ಸಿಪಲ್‌ ಪಿಯು ಕಾಲೇಜಿನ ಉಪ ಪ್ರಾಚಾರ್ಯ ಮಾರುತಿ ಸೋಣವಾನೆ, ಈತನ ಮಗ ಸಮೀತಕುಮಾರ್‌ ಸೋಣವಾನೆ ಅವರಿಗೆ ನೀಡಿದ್ದ. ಜತೆಗೆ ಪ್ರಶ್ನೆಪತ್ರಿಕೆಯನ್ನು ವಾಟ್ಸ್‌ಆ್ಯಪ್‌ ಮೂಲಕ ಸೋರಿಕೆ ಮಾಡಿದ್ದ.

ಅಲ್ಲದೇ ಇನ್ನುಳಿದ ಆರೋಪಿತರಿಗೆ ಇಲೆಕ್ಟ್ರಾನಿಕ್‌ ಡಿವೈಸ್‌ ಕೊಟ್ಟು ಕಳುಹಿಸಿದ್ದ ತಂಡದ ಪ್ರಮುಖ ಆರೋಪಿಯಾಗಿದ್ದ ಈತ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ. ಡಿಸಿಆರ್‌ಬಿ ಡಿವೈಎಸ್‌ಪಿ ಆಗಿರುವ ತನಿಖಾಧಿಕಾರಿ ವೀರೇಶ ದೊಡಮನಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next