Advertisement

KPTCL ಕಂಪೌಂಡ್ ಗೋಡೆ ಮೈಮೇಲೆ ಬಿದ್ದು ಕಾರ್ಮಿಕ ಸಾವು

06:22 PM Mar 18, 2024 | Team Udayavani |

ಮುದ್ದೇಬಿಹಾಳ: ನಿರ್ಮಾಣ ಹಂತದ ಕೆಪಿಟಿಸಿಎಲ್ ನ 110 ಕೆವಿ ವಿದ್ಯುತ್ ಸ್ಟೇಷನ್ ಕಂಪೌಂಡ್ ಮೈಮೇಲೆ ಬಿದ್ದು ಕಾರ್ಮಿಕ ವಿಜಯನಗರ ಜಿಲ್ಲೆ ಹೊಸಪೇಟೆ ಮೂಲದ ಬಸಲಿಂಗಯ್ಯ ಶಾಸ್ತ್ರಿ (40) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕು ಆಲಮಟ್ಟಿ ರಸ್ತೆ ಪಕ್ಕದ ಜಟ್ಟಗಿ ಗ್ರಾಮವ್ಯಾಪ್ತಿಯಲ್ಲಿ ಸೋಮವಾರ ಸಂಜೆ ನಡೆದಿದೆ.

Advertisement

ಈತ ವೆಲ್ಡಿಂಗ್ ಕೆಲಸ ಮಾಡುವವನಾಗಿದ್ದು ಕಂಪೌಂಡ್ ಕೆಳಗೆ ನೆರಳಿಗೆ ವಿಶ್ರಾಂತಿ ಪಡೆಯಲು ಕುಳಿತಾಗ ಕಳಪೆ ಗುಣಮಟ್ಟದ ಮತ್ತು ಕಲ್ಲುಗಳಿಂದ ನಿರ್ಮಿಸಲ್ಪಟ್ಟ ಬೃಹತ್ ಕಂಪೌಂಡ್ ಗೋಡೆ ಮೈಮೇಲೆ ಬಿದ್ದಿದೆ. ನೋಡಿವಷ್ಟರಲ್ಲೇ ಕಲ್ಲುಗಳ ನಡುವೆ ಸಿಲುಕಿದ್ದ ಈತನನ್ನು ಕಲ್ಲು ಸರಿಸಿ ಹೊರಗೆ ತೆಗೆಯುವಷ್ಟರಲ್ಲಿ ಮೃತಪಟ್ಟಿದ್ದ ಎಂದು ಮೂಲಗಳು ತಿಳಿಸಿವೆ.

ಸ್ಟೇಷನ್ ಕಾಮಗಾರಿಯನ್ನು ಬೆಂಗಳೂರು ಮೂಲದ ಇಲೆಕ್ಟ್ರಿಕಲ್ ಕನ್ಸಟ್ರಕ್ಷನ್ ಕಂಪನಿಯೊಂದು ಗುತ್ತಿಗೆ ಹಿಡಿದಿದ್ದು ಕಾಮಗಾರಿ ನಿರ್ವಹಿಸಲು ಹೊಸಪೇಟೆಯಿಂದ ಕಾರ್ಮಿಕರನ್ನು ಕರೆಸಲಾಗಿತ್ತು ಎಂದು ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ಕೆಪಿಟಿಸಿಎಲ್ ನ ಕಾರ್ಯಪಾಲಕ ಅಭಿಯಂತರೆ ಸುನಂದಾ ಜಂಬಗಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪೊಲೀಸರು ಧಾವಿಸಿ ಕಾನೂನು ಕ್ರಮ ಕೈಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next