Advertisement

ಕೆಪಿಎಲ್‌: ಶಿವಮೊಗ್ಗ ತಂಡಕ್ಕೆ ಜಯ

10:13 AM Sep 08, 2017 | |

ಮೈಸೂರು: ಶೋಯಿಬ್‌ ಮ್ಯಾನೇಜರ್‌, ಲಿಯಾನ್‌ ಖಾನ್‌ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ ನಮ್ಮ ಶಿವಮೊಗ್ಗ ತಂಡ ಕೆಪಿಎಲ್‌ನಲ್ಲಿ ಬಿಜಾಪುರ್‌ ಬುಲ್ಸ್‌ಗೆ 162 ರನ್‌ ಸವಾಲು ನೀಡಿದೆ. ಇಲ್ಲಿನ ಮಾನಸಗಂಗೋತ್ರಿಯ ಎಸ್‌ ಡಿಎನ್‌ಆರ್‌ ಒಡೆಯರ್‌(ಗ್ಲೆಡ್ಸ್‌) ಮೈದಾ ನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ನಮ್ಮ ಶಿವ ಮೊಗ್ಗ 20 ಓವರ್‌ಗೆ 5 ವಿಕೆಟ್‌ ಕಳೆದುಕೊಂಡು 161 ರನ್‌ ಬಾರಿಸಿತು.

Advertisement

ಆರಂಭಿಕರಾಗಿ ಬಂದ ಸಾದಿಕ್‌ ಕಿರ್ಮಾನಿ ಮತ್ತು ಲಿಯಾನ್‌ ಖಾನ್‌ ಕಣಕ್ಕೆ ಇಳಿದರು. ತಂಡದ ಮೊತ್ತ 8 ರನ್‌ ಆಗುತ್ತಿದ್ದಂತೆ ಕಿರ್ಮಾನಿ (7) ಮಿಥುನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕಳೆದುಕೊಂಡರು. ಆ ನಂತರ ಬಂದ ಜೋನಾಥನ್‌(15) ಕೂಡ ಹೆಚ್ಚುಹೊತ್ತು ನಿಲ್ಲಲಿಲ್ಲ. 

ಶೋಯಿಬ್‌, ಲಿಯಾನ್‌ ಭರ್ಜರಿ ಆಟ:3ನೇ ವಿಕೆಟ್‌ಗೆ ಜತೆಯಾದ ಶೋಯಿಬ್‌ ಮತ್ತು ಲಿಯಾನ್‌ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದರು. ಇದರಿಂದಾಗಿ ಶಿವಮೊಗ್ಗ ತಂಡದ ಸ್ಕೋರ್‌ ಏರಿಕೆಯಾಗಿತು. ಆದರೆ ಕೊನೆಯ ಅಂತದಲ್ಲಿ ಈ ಜೋಡಿ ವಿಕೆಟ್‌ ಕಳೆದು ಕೊಂಡಿತು. ಶೋಯಿಬ್‌ 40 ಎಸೆತದಲ್ಲಿ 66 ರನ್‌ ಬಾರಿಸಿದರು. ಅವರ ಇನಿಂಗ್ಸ್‌ನಲ್ಲಿ 7 ಬೌಂಡರಿ, 3 ಸಿಕ್ಸರ್‌ ಸೇರಿತ್ತು. ಲಿಯಾನ್‌ ಖಾನ್‌ 43 ಎಸೆತದಲ್ಲಿ 4 ಬೌಂಡರಿ, 2 ಸಿಕ್ಸರ್‌ ಸೇರಿದಂತೆ 50 ರನ್‌ ಬಾರಿಸಿದರು. ಈ ಇಬ್ಬರ ಅರ್ಧಶತಕ ಶಿವಮೊಗ್ಗ ತಂಡದ ಸ್ಕೋರ್‌ ಏರಿಕೆಯಾಗಲು ಕಾರಣವಾಯಿತು. ಬಿಜಾಪುರ್‌ ಬುಲ್ಸ್‌ ಪರ ಅಭಿಮನ್ಯು ಮಿಥುನ್‌ 22ಕ್ಕೆ 2 ವಿಕೆಟ್‌ ಪಡೆದರು. 

ಸಂಕ್ಷಿಪ್ತ ಸ್ಕೋರ್‌: ನಮ್ಮ ಶಿವಮೊಗ್ಗ 20 ಓವರ್‌ಗೆ 161/5(ಶೋಯಿಬ್‌ 66,  ಲಿಯಾನ್‌ 50, ಮಿಥುನ್‌ 22ಕ್ಕೆ2).

ಸಿ.ದಿನೇಶ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next