ರಾಜ್ಯೋತ್ಸವದ ಶುಭಾಶಯಗಳು.
ಇಂದಿನ (ನ.1, ಗುರುವಾರ) ಉದಯವಾಣಿ ನನಗೆ ಒಂದು ಅಚ್ಚರಿಯ ಉಡುಗೊರೆ ನೀಡಿದೆ. ನನಗೆ ಹೊಳೇನರಸೀಪುರದ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸಿದ ನೆಚ್ಚಿನ ಗುರು ಕೆ.ಪದ್ಮಾವತಮ್ಮ ಅವರ ಪತ್ರ ನನ್ನನ್ನು ಮತ್ತೆ ಬಾಲ್ಯದ ದಿನಗಳಿಗೆ ಕೊಂಡೊಯ್ದಿದೆ. ಅವರ ಆಶಯ, ಸಲಹೆಗಳನ್ನು ಖಂಡಿತಾ ಪಾಲಿಸುವ ಪ್ರಯತ್ನ ಮಾಡುತ್ತೇನೆ. ಅವರು ಈ ಇಳಿವಯಸ್ಸಿನಲ್ಲಿಯೂ ನಾಡು, ನುಡಿ, ಜನರ ಬಗ್ಗೆ ತೋರಿದ ಕಾಳಜಿ ಅನನ್ಯ. ನಾನು ಅವರ ವಿದ್ಯಾರ್ಥಿಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಸದಾ ಎಚ್ಚರಿಸುವ ತಾಯಿಯ ಕಕ್ಕುಲತೆ, ಕಾಳಜಿ ಅವರ ಪತ್ರದಲ್ಲಿದೆ. ನೋಡಿ ಮನದುಂಬಿತು. ಗುರುಗಳು ಕೇಳಿದ ಗುರುದಕ್ಷಿಣೆಗೆ ಸಂಬಂಧಿಸಿದಂತೆ ನಮ್ಮ ಪ್ರಯತ್ನಗಳ ಕಿರು ಮಾಹಿತಿ ಇಲ್ಲಿದೆ. ಕೆಲವು ವಿಚಾರಗಳ ಕುರಿತು ಈಗಾಗಲೇ ಕ್ರಮ ವಹಿಸಲಾಗುತ್ತಿದೆ. ಇನ್ನು ಕೆಲವು ಉಪಯುಕ್ತ ಸಲಹೆಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವೆ. ಗುರುಗಳ ಮಾರ್ಗದರ್ಶನ ಮುಂದೆಯೂ ನಮಗೆ ದೊರೆಯುತ್ತಿರಲಿ. ಇದನ್ನು ಸಾಧ್ಯವಾಗಿಸಿದ “ಉದಯವಾಣಿ’ ಬಳಗಕ್ಕೂ ನನ್ನ ಕೃತಜ್ಞತೆಗಳು.
Advertisement
ತಮ್ಮ ವಿಶ್ವಾಸಿ ಎಚ್.ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ, ಕರ್ನಾಟಕ ಸರಕಾರ
Related Articles
Advertisement
5. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ಕನ್ನಡ ದಲ್ಲಿಯೇ ವ್ಯವಹರಿಸುವಂತೆ ಇರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗುರುಗಳು ಗುರುತಿಸಿದಂತೆ ಕನ್ನಡದಲ್ಲಿರುವ ಕಡತಗಳನ್ನು ಮಾತ್ರ ಪರಿಶೀಲಿಸಲು ತೀರ್ಮಾನಿಸಿದ್ದು, ಅದ ರಂತೆ ನಡೆದುಕೊಳ್ಳುತ್ತಿರುವೆ. ಸಚಿವ ಸಂಪುಟದ ಸಹೋದ್ಯೋಗಿಗಳಿಗೂ ಇದೇ ಸಲಹೆ ನೀಡುವೆ. ಅವರೂ ಪಾಲಿಸುತ್ತಾರೆಂಬ ವಿಶ್ವಾಸ ನನ್ನದು.
6. ಕನ್ನಡಿಗರಿಗೆ ಖಾಸಗಿ ವಲಯದಲ್ಲಿಯೂ ಉದ್ಯೋಗ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ಕರಡು ಸಿದ್ಧಪಡಿಸಲಾಗಿದ್ದು, ಸರಕಾರದ ಮುಂದೆ ಪರಿಶೀಲನೆಯಲ್ಲಿದೆ.