Advertisement

ಕೊಟ್ಟೂರು: ಅಕಾಲಿಕ ಮಳೆಗೆ ಅಪಾರ ಬೆಳೆ ಹಾನಿ

05:43 PM May 09, 2022 | Team Udayavani |

ಕೊಟ್ಟೂರು: ನಿಂಬಳಗೇರಿ ಗ್ರಾಮ ಹಾಗೂ ಸುತ್ತಮುತ್ತ ಭಾನುವಾರ ಸಂಜೆ ಬಿರುಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

Advertisement

ಬಿರುಗಾಳಿಗೆ ಹಾರಿಹೋದ ಮನೆ ಶೀಟುಗಳು, ಹೆಂಚುಗಳು, ಆಲಿಕಲ್ಲು ಮಳೆಗೆ ನೆಲಕಚ್ಚಿದ 20ರಿಂದ 30 ಎಕರೆ ದಾಳಿಂಬೆ ತೋಟ ಹತ್ತರಿಂದ ಹದಿನೈದು ಎಕರೆ ಬಾಳೆತೋಟ, 10 ಎಕರೆ ಪಪ್ಪಾಯಿ ಒಟ್ಟು ಸುಮಾರು 30ರಿಂದ 40 ಲಕ್ಷ ರೂ. ಹಾನಿಯಾಗಿದೆ.

ಬಿರುಗಾಳಿಗೆ ಧರೆಗುರುಳಿದ ಬೃಹತ್‌ ಮರ ಗಿಡಗಳು ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದು, ರೈತರು ಬೆಳೆದಿದ್ದ ಫಸಲು ಬಂದಿದ್ದ ಬಾಳೆತೋಟ ದಾಳಿಂಬೆ ತೋಟ ಪಪ್ಪಾಯಿ ಇನ್ನೂ ಅನೇಕ ಬೆಳೆಗಳಿಗೆ ಹಾನಿಯಾಗಿದ್ದು ಅನಿರೀಕ್ಷಿತವಾಗಿ ಬಿದ್ದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಜನರ ಜೀವನ ಅಸ್ತವ್ಯಸ್ತವಾಗಿದೆ. ಇದ್ದಕ್ಕಿದ್ದಂತೆ ಸುರಿದ ಬಿರುಗಾಳಿ ಸಹಿತ ಮಳೆ ರೈತರಿಗೆ ದಿಕ್ಕು ತೋಚದಂತಾಗಿದೆ.

ರೈತರಿಗೆ ಚಿಂತೆ

Advertisement

ಕಾಡು ಹಂದಿ ಹಾವಳಿ ಭೀತಿ ಇಲ್ಲ. ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಬೆಳೆ. ವರ್ಷಕಾಲ ಕಷ್ಟಪಟ್ಟರೆ ಒಂದಷ್ಟು ಆದಾಯ ಬರುತ್ತದೆ ಎಂದು ಕಷ್ಟಪಟ್ಟು ಬೆಳೆದ ಬಾಳೆ, ಅಲ್ಪಾವಧಿ ಬೆಳೆಯಾಗಿ ತರಕಾರಿ ಬೆಳೆಗಳಾದ ಟೊಮೆಟೋ ಸೋಲಾರ್‌ ಬೀನ್ಸ್‌ ಇತರೆ ತರಕಾರಿ ಬೆಳೆಗಳು ನಾಶವಾಗಿರುವ ಹಿನ್ನೆಲೆಯಲ್ಲಿ ರೈತರು ಕಂಗಾಲಾಗಿದ್ದಾರೆ. ಬಿರುಗಾಳಿಯಿಂದ ಬೆಳೆಗಳು ಕ್ಷ ಣಾರ್ಧದಲ್ಲೇ ನಾಶವಾದವು. ಈ ರೀತಿ ಆದರೆ ಮಾಡಿದ ಸಾಲ ತೀರಿಸುವುದು ಹೇಗೆ. ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಏನು ಮಾಡುವುದು ಎಂದು ನಿಂಬಳಗೇರಿ ಗ್ರಾಮದ ನಷ್ಟಕ್ಕೆ ಸಿಲುಕಿದ ರೈತ ಕೊಟ್ರೇಶ್‌, ಜಿ. ಶಾಂತಮ್ಮ, ಮಹಾಂತೇಶ್‌, ರಾಜೇಂದ್ರ ಗೌಡ, ಎಸ್.ಪ್ರಕಾಶ್, ಗಂಗಾಧರ, ಮರುಳಸಿದ್ದಪ್ಪ ಅಳಲು ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next