Advertisement

ಗ್ರಾಮಾಭಿವೃದ್ಧಿ ಖಾತೆ ಇಷ್ಟ: ಕೋಟ ಶ್ರೀನಿವಾಸ ಪೂಜಾರಿ

12:14 AM Aug 05, 2021 | Team Udayavani |

ಸಚಿವ ಸ್ಥಾನ ದೊರೆಯುವ ನಿರೀಕ್ಷೆ  ಇತ್ತಾ?

Advertisement

ಮೂರು ಬಾರಿ ವಿಧಾನಪರಿಷತ್‌ ಸದಸ್ಯನಾಗಿ, 2 ಬಾರಿ ಸಚಿವನಾಗಿ ಹಾಗೂ ಒಂದು ಬಾರಿ ವಿಪಕ್ಷ ನಾಯಕನಾಗಿ, ಸಭಾ ನಾಯಕನಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದೆ. ಹೀಗಾಗಿ ಸಹಜವಾಗಿ ಮಂತ್ರಿಯಾಗುವ ನಿರೀಕ್ಷೆ ಇತ್ತು. ಆದರೆ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳಿಂದ ಸ್ವಲ್ಪಮಟ್ಟಿಗಿನ ಆತಂಕವಿತ್ತು.

ಯಾವುದಾದರೂ ಖಾತೆಯ ನಿರೀಕ್ಷೆ ಇದೆಯಾ?

ಸರಕಾರ ಈ ಹಿಂದೆ ನೀಡಿದ ಧಾರ್ಮಿಕ ದತ್ತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅತ್ಯಂತ ದೊಡ್ಡ ಖಾತೆಯಾಗಿದೆ. ಇದನ್ನು ಹೊರತುಪಡಿಸಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ನೀಡಿದರೆ ಸಂತೋಷದಿಂದ ಕಾರ್ಯನಿರ್ವಹಿಸುವೆ.

ಮುಜರಾಯಿ ಖಾತೆ ಮತ್ತೆ ಸಿಗಬಹುದಾ ?

Advertisement

ಮುಜರಾಯಿ ಖಾತೆಗೆ ಯಾರೂ ಬೇಡಿಕೆ ಸಲ್ಲಿಸುವುದಿಲ್ಲ ಎಂಬ ಧೈರ್ಯ ಇದೆ. ಹೀಗಾಗಿ ಅದು ನನ್ನಲ್ಲೇ ಉಳಿಯಬಹುದು.

ಮಂತ್ರಿಯಾಗಿದ್ದಕ್ಕೆ ಯಾರಿಗೆ ಕೃತಜ್ಞತೆ ಸಲ್ಲಿಸುತ್ತೀರಿ ?

ಓರ್ವ ಸಾಮಾನ್ಯ ಕಾರ್ಯಕರ್ತನ ಕಾರ್ಯವೈಖರಿಯನ್ನು ಗಮನಿಸಿ ಮತ್ತೆ ಅವಕಾಶ ನೀಡಿದ ರಾಜ್ಯಾಧ್ಯಕ್ಷ ನಳಿನ್‌ ಮುಖ್ಯಮಂತ್ರಿ ಬೊಮ್ಮಾಯಿ, ಸಿ.ಟಿ.ರವಿ, ಕೇಂದ್ರ ನಾಯಕರಿಗೆ ಹಾಗೂ ಪಕ್ಷ ಹಾಗೂ ಸಂಘಟನೆಗೆ ಕೃತಜ್ಞತೆ ಸಲ್ಲಿಸುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next