Advertisement
ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತೋ ದ್ಯಾನದಲ್ಲಿ ನೂತನ ಮತ್ಸ್ಯ ಪ್ರದರ್ಶನಾ ಲಯವನ್ನು ರವಿವಾರ ಉದ್ಘಾಟಿಸಿ ಬಳಿಕ ಪ್ರವಚನ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಕಡಲ ಮೀನುಗಾರಿಕೆಯಡಿ ಮರಿ ಮೀನು ಉತ್ಪಾದನೆಗೆ ಮೂಲ್ಕಿಯಲ್ಲಿ ಹೊಸ ಯೋಜನೆ ರೂಪಿಸಲಾಗಿದೆ. ಈ ಹಿಂದೆ ಕೇರಳ, ಗೋವಾದಿಂದ ತರಿಸಲಾಗುತ್ತಿತ್ತು. ಸಾಗಾಟ ಹೊರೆ ತಪ್ಪಿಸುವ ಸಲುವಾಗಿ ಕಡಲ ಮೀನುಗಾರಿಕೆ ಉತ್ಪಾದನೆಗೆ ಹೊಸ ರೂಪ ತರಲಾಗುವುದು ಎಂದರು.
ಇದನ್ನೂ ಓದಿ:ನಾನು ಲೋಕಸಭಾ ಉಪಚುನಾವಣೆಗೆ ಸ್ಪರ್ದಿಸಲ್ಲ: ರಮೇಶ್ ಜಾರಕಿಹೊಳಿ ಪುತ್ರನ ಸ್ಪಷ್ಟನೆ
ಸದ್ಯದಲ್ಲೇ ಹಳೆಯ ವಿಗ್ರಹ ಪ್ರದರ್ಶನಾಲಯ ಸಿದ್ಧಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಮಾತನಾಡಿ, ಮೀನು ಸಾಕಣೆಯೆಂದರೆ ಮಕ್ಕಳನ್ನು ಆರೈಕೆ ಮಾಡಿದಂತೆ. ಜನರಲ್ಲಿ ಮತ್ಸ್ಯ ಸಂಗ್ರಹ ಕಲ್ಪನೆ ಹವ್ಯಾಸವಾಗಿ ಬೆಳೆಯಬೇಕಿದೆ. ಇದಕ್ಕಾಗಿ ನಗರ ಪ್ರದೇಶಗಳ ಎಲ್ಲೆಡೆ ಮತ್ಸ್ಯಗಾರವನ್ನು ನಿರ್ಮಿಸುವಂತೆ ಸಚಿವರಲ್ಲಿ ಮನವಿ ಮಾಡಿದರು. ಧರ್ಮಸ್ಥಳದಲ್ಲಿ ಮೂರು ತಿಂಗಳ ಒಳಗಾಗಿ ಹಳೇ ವಿಗ್ರಹಗಳ ಪ್ರದರ್ಶನಾಲಯ ಸಿದ್ಧಗೊಳ್ಳಲಿದೆ ಎಂದರು. ಲಲಿತೋದ್ಯಾನಕ್ಕೆ ವಿಶೇಷ ಮೀನುಗಳ ಕೊಡುಗೆ ಹಾಗೂ ಉಚಿತ ಆಹಾರ ಒದಗಿಸುತ್ತಿರುವ ಚೇತನ್ ಬೆಂಗಳೂರು, ಪ್ರದೀಪ್ ಬೆಂಗಳೂರು, ಮೀನಿನ ಆರೈಕೆ ಮಾಡುತ್ತಿರುವ ಹಂಝ ಅವರನ್ನು ಡಾ| ಹೆಗ್ಗಡೆ ಗೌರವಿಸಿದರು. ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ಮಮತಾ ಎಂ. ಶೆಟ್ಟಿ, ಶ್ರೀ ಧ. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಸೀತಾರಾಮ ತೋಳ್ಪಡಿತ್ತಾಯ, ಎ. ವೀರು ಶೆಟ್ಟಿ ಉಪಸ್ಥಿತರಿದ್ದರು.
ಧರ್ಮಸ್ಥಳದ ಡಿ. ಹರ್ಷೆಂದ್ರ ಕುಮಾರ್ ಅವರು ಸ್ವಾಗತಿಸಿ, ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ ಅವರು ವಂದಿಸಿದರು. ಉಪನ್ಯಾಸಕ ದೀಕ್ಷಿತ್ ರೈ ಅವರು ಕಾರ್ಯ ಕ್ರಮ ನಿರೂಪಿಸಿದರು. ಸರಕಾರಕ್ಕೆ ಧರ್ಮಸ್ಥಳದ ಪ್ರೇರಣೆ
ಕೋವಿಡ್ ಸಂದರ್ಭ ಮೀನುಗಾರಿಕಾ ನಿರುದ್ಯೋಗಿಗಳಾಗಿರುವವರಿಗೆ ಸರಕಾರದಿಂದ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಪಂಜರ ಮೀನುಗಾರಿಕೆ ಅನುಷ್ಠಾನಕ್ಕೆ ತರಲಾಗಿದೆ. ಗ್ರಾಮಗಳ ಅಭಿವೃದ್ಧಿಗೆ ಡಾ| ಹೆಗ್ಗಡೆ ಅವರು ಹಮ್ಮಿಕೊಳ್ಳುವ ಯೋಜನೆ ಸರಕಾರದ ಯೋಜನೆಗಳಿಗಿಂತ ಭಿನ್ನವಾದುದು. ಧರ್ಮಸ್ಥಳದಲ್ಲಿ ಮತ್ಸಾಲಯ ಉದ್ಘಾಟಿಸುವ ಮೂಲಕ ಸರಕಾರದಿಂದ ಆಲಂಕಾರಿಕ ಮೀನು ಉತ್ಪಾದನೆಯೆಡೆಗೆ ಚಿಂತಿಸಲು ಪ್ರೇರಣೆಯಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಸಚಿವರು