Advertisement

Kota; ಡೀಸೆಲ್‌ ಹಣ ಕೇಳಿದಕ್ಕೆ ಮಾಲಕನಿಗೆ ಹಲ್ಲೆ; ಪ್ರಕರಣ ದಾಖಲು

12:18 AM Jan 10, 2024 | Team Udayavani |

ಕೋಟ: ಪೆಟ್ರೋಲ್‌ ಬಂಕ್‌ನಲ್ಲಿ ಡೀಸೆಲ್‌ ಹಾಕಿಸಿಕೊಂಡಿದ್ದ ಹಣದ ಬಾಕಿ ಮೊತ್ತ ಕೇಳಿದ್ದಕ್ಕೆ ಹಲ್ಲೆ ನಡೆಸಿದ ಘಟನೆ ಕೋಟದಲ್ಲಿ ಜ. 8ರಂದು ಸಂಭವಿಸಿದೆ.

Advertisement

ಯಡ್ತಾಡಿ ನಿವಾಸಿ ಚೇತನ್‌ ಕುಮಾರ್‌ ಎನ್ನುವವರು ಅಮಾಸೆಬೈಲ್‌ನಲ್ಲಿ ಪೆಟ್ರೋಲ್‌ ಬಂಕ್‌ ಅನ್ನು ನಡೆಸಿಕೊಂಡಿದ್ದು, ಅವರ ಪೆಟ್ರೋಲ್‌ ಬಂಕ್‌ನಿಂದ ಸಚಿನ್‌ ಎನ್ನುವಾತ 6,800 ರೂ. ಮೌಲ್ಯದ ಡೀಸೆಲ್‌ ಅನ್ನು ಹಾಕಿಕೊಂಡು ಹಣವನ್ನು ಮರುದಿನ ಕೊಡುತ್ತೇನೆಂದು ತಿಳಿಸಿದ್ದ. ಆದರೆ ಹಣವನ್ನು ಕೊಟ್ಟಿರುವುದಿಲ್ಲ.

ಈ ಬಗ್ಗೆ ಕರೆ ಮಾಡಿ ಹಣ ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೆ„ದು, ಜೀವ ಬೆದರಿಕೆ ಹಾಕಿದ್ದ. ಈ ವಿಚಾರವನ್ನು ಪರಿಚಯಸ್ಥರ ಮೂಲಕ ರಾಜಿಯಲ್ಲಿ ಇತ್ಯರ್ಥಗೊಳಿಸಲು ಜ. 8ರಂದು ಕೋಟ ಶಾಲೆಯ ಮೈದಾನಕ್ಕೆ ಬಂದಾಗ ಸಚಿನ್‌ ತನ್ನ ಸಹಚರರಾದ ಶಂಕರ ಕೊಡ್ಲಾಡಿ, ನಾಗ, ಅಂಬರೀಶ್‌ ಅವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ.

ಗಲಾಟೆಯ ಸಂದರ್ಭ ಚಿನ್ನದ ಸರ ಕಳೆದು ಹೋಗಿದೆ ಎಂದು ಚೇತನ್‌ ಅವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ ಸಮಸ್ಯೆ:
ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
ಕೋಟ: ಹಾರ್ದಳ್ಳಿ ಮಂಡಳ್ಳಿ ನಿವಾಸಿ ಗೀತಾ (60) ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದು, ಜ. 7ರಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಈ ರೀತಿ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next