Advertisement

ಕೋಟ ಜೋಡಿ ಕೊಲೆ: ಇಬ್ಬರು ಪೊಲೀಸ್‌ ಸಿಬಂದಿ ಬಂಧನ

03:57 AM Feb 12, 2019 | |

ಕೋಟ: ಇಲ್ಲಿನ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಉಡುಪಿಯ ಜಿಲ್ಲಾ ಸಶಸ್ತ್ರ ಪೊಲೀಸ್‌ ಮೀಸಲು ಪಡೆಯ ಇಬ್ಬರು ಪೇದೆಗಳನ್ನು ಬಂಧಿಸಲಾಗಿದೆ. ಪ್ರಕರಣದ  ಪ್ರಮುಖ  ಆರೋಪಿಗಳಿಗೆ ಪರಾರಿಯಾಗಲು ನೆರವು ನೀಡಿದ್ದ ಆರೋಪ ಇವರ ಮೇಲಿದೆ. ಆ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ 8ಕ್ಕೇರಿದೆ.

Advertisement

ಮಂದಾರ್ತಿ ಸಮೀಪದ ನಡೂರು ನಿವಾಸಿ ಪವನ್‌ ಅಮೀನ್‌ ಮತ್ತು  ನಾಡ ಗುಡ್ಡೆಯಂಗಡಿಯ ವೀರೇಂದ್ರ ಅಚಾರ್ಯ ಬಂಧಿತರು. ಬಂಧಿತರನ್ನು ರವಿವಾರ ರಾತ್ರಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವ ರಿಗೆ ಫೆ. 15ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. 

ಆರೋಪಿಗಳೊಂದಿಗೆ ಒಡನಾಟ
ಪವನ್‌ ಮತ್ತು  ವೀರೇಂದ್ರ  ಅವರಿಗೆ  ಆರೋಪಿಗಳಾದ ಹರೀಶ್‌ ರೆಡ್ಡಿ, ರಾಜ ಶೇಖರ ರೆಡ್ಡಿ, ಮಹೇಶ ಗಾಣಿಗ ಮತ್ತು ಸಂತೋಷ ಕುಂದರ್‌ ಮುಂತಾದವರೊಂದಿಗೆ ಹಲವು ವರ್ಷದಿಂದ ಒಡನಾಟವಿತ್ತು.  ಜ.26ರಂದು   ಕೊಲೆ ನಡೆಸಿದ ಬಳಿಕ ಎಲ್ಲ ಪ್ರಮುಖ ಅರೋಪಿಗಳು ಪವನ್‌ಗೆ ಸೇರಿರುವ ಹೆಬ್ರಿಯ ಕುಚ್ಚಾರಿನ ಮನೆಯಲ್ಲಿ ರಾತ್ರಿ ತಂಗಿದ್ದರು. ಜ. 27ರಂದು ಬೆಳಗ್ಗೆ  ಹರೀಶ್‌ ರೆಡ್ಡಿಯು ಪವನ್‌ಗೆ ಕರೆ ಮಾಡಿ ಒಂದು ಸಿಮ್‌ ಮತ್ತು ಮೊಬೈಲ್‌, ಹಣ ಮತ್ತು ಕೆಲವು ವಸ್ತುಗಳನ್ನು ಕಳುಹಿಸಿ ಕೊಡಲು ಕೇಳಿದ್ದ. ಅವುಗಳನ್ನು ಪವನ್‌ ಅಮೀನ್‌, ಪ್ರಣವ್‌ ಭಟ್‌ ಎಂಬಾ ತನ ಮೂಲಕ  ಅರೋಪಿಗಳಿಗೆ ತಲುಪಿಸಿದ್ದಾನೆ.

ಅನಂತರ  ರಾತ್ರಿ ವೀರೇಂದ್ರ ಅಚಾರ್ಯನೊಂದಿಗೆ ಸೇರಿ ಕಾರಿನ ವ್ಯವಸ್ಥೆ ಮಾಡಿಕೊಟ್ಟು  ಅರೋಪಿಗಳನ್ನು ಅಗುಂಬೆ, ಎನ್‌.ಅರ್‌.ಪುರ, ಮಲ್ಲಂದೂರು ಮುಂತಾದೆಡೆಯ ತನ್ನ ಸಂಬಂಧಿಕರ ಮನೆಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದಾನೆ. ಜ. 28ರಂದು ಅರೋಪಿಗಳನ್ನು ಮಲ್ಲಂದೂರಿನಲ್ಲಿಯೆ ಬಿಟ್ಟು ವೀರೇಂದ್ರನೊಂದಿಗೆ  ಕಾರಿನಲ್ಲಿ ವಾಪಸ್‌ ಬರುವಾಗ, ಹರೀಶ್‌ ರೆಡ್ಡಿ ಕೊಟ್ಟ ಮೊಬೈಲ್‌  ಮತ್ತು ಇತರ ವಸ್ತುಗಳನ್ನು ಬಚ್ಚಿಡಲು ಸಹಕರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಪರಾರಿಯಾಗಲು ಉಪಯೋಗಿಸಿದ್ದ  ಕಾರು, ಮೊಬೈಲ್‌ ಮತ್ತು ಇತರ  ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಪವನ್‌ ಜತೆ ತೆರಳಿದ್ದ  ವೀರೇಂದ್ರ
ಸಂಬಂಧಿಯೋರ್ವರ ಮೂಲಕ ಪವನ್‌ಗೆ  ಹಲವು ವರ್ಷಗಳ ಹಿಂದೆ  ಹರೀಶ್‌ ರೆಡಿªಯ ಸಂಪರ್ಕವಾಗಿತ್ತು ಹಾಗೂ  ಮೂರು ವರ್ಷಗಳಿಂದ ಆಗಾಗ ಜತೆ ಸೇರುತ್ತಿದ್ದರು. ಜೋಡಿ ಕೊಲೆ ನಡೆಸಿದ  ಬಳಿಕ ಪರಾರಿಯಾಗಲು ಹರೀಶ್‌ ರೆಡ್ಡಿ ಹಲವರ ಬಳಿ ನೆರವು ಯಾಚಿಸಿದ್ದು, ಪವನ್‌ಗೂ ಕರೆ ಮಾಡಿ ನೆರವು ಕೋರಿದ್ದ. ಹೀಗಾಗಿ  ವೀರೇಂದ್ರ ಆಚಾರ್ಯನೊಂದಿಗೆ ಸೇರಿ ಸಹಾಯ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದು ಬಂದಿದೆ.

Advertisement

ಇನ್ನೂ ಹಲವರ ಬಂಧನ
ಪ್ರಕರಣದ ಆರೋಪಿಗಳಿಗೆ ಪರಾರಿಯಾಗಲು ಹಾಗೂ ಅಡಗಿಕೊಳ್ಳಲು ಇನ್ನೂ ಹಲವು ಮಂದಿ ಸಹಾಯ ನೀಡಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next