Advertisement

Koratagere; ಟ್ರ್ಯಾಕ್ಟರ್ ಚಾಲನೆ ವೇಳೆ ಮೂರ್ಛೆರೋಗ: ವ್ಯಕ್ತಿ ದಾರುಣ ಸಾವು

06:07 PM Mar 10, 2024 | Team Udayavani |

ಕೊರಟಗೆರೆ: ಜಮೀನಿಗೆ ಮಣ್ಣು ಹಾಕುತ್ತಿದ್ದ ಸಂದರ್ಭದಲ್ಲಿ ಟ್ರ್ಯಾಕ್ಟರ್ ಚಾಲಕನೋರ್ವನಿಗೆ ಮೂರ್ಛೆರೋಗ ಕಾಣಿಸಿಕೊಂಡಿದ್ದು,  ಇಂಜಿನಿಂದ ಕೆಳಗೆ ಉರುಳಿ ಬಿದ್ದಾಗ ಟ್ರೈಲರ್ ನ ಹಿಂಬದಿಯ ಟೈರ್ ತಲೆಯ ಮೇಲೆ ಚಲಿಸಿ ಚಾಲಕ ಸ್ಥಳದಲ್ಲಿಯೇ ಕೊನೆಯುಸಿರೆಳೆದ ಘಟನೆ ಚನ್ನರಾಯನದುರ್ಗ ಹೋಬಳಿಯ ಬೆಟ್ಟದ ಶಂಭೋನಹಳ್ಳಿ ಬಳಿ ನಡೆದಿದೆ.

Advertisement

ರಾಜಣ್ಣ ಅವರ ಪುತ್ರ ಶ್ರೀನಿವಾಸ್ ಮೂರ್ತಿ (36) ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿ. ಶ್ರೀನಿವಾಸ್ ಮೂರ್ತಿ ಟ್ರಾಕ್ಟರ್ ಮಾಲಕನಾಗಿದ್ದು ಆತನೇ ಚಾಲಕನಾಗಿದ್ದ ಎನ್ನಲಾಗಿದ್ದು, ಮಣ್ಣು ಸಾಗಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಮೂರ್ಛೆರೋಗ ಕಾಣಿಸಿಕೊಂಡು ಅವಘಡ ನಡೆದಿದು ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next