Advertisement

ಕೊರಟಗೆರೆ:  ಬೈಕ್ ಮೇಲಿಂದ ಬಿದ್ದು ಸವಾರ ಸಾವು

08:07 PM Sep 30, 2021 | Team Udayavani |

ಕೊರಟಗೆರೆ: ಬೈಕ್ ಮೇಲಿಂದ ಬಿದ್ದು ಸವಾರ ಸಾವನ್ನಪ್ಪಿರುವ ಘಟನೆ  ತಾಲ್ಲೂಕಿನ ಹೊಳವನಹಳ್ಳಿ ಹೋಬಳಿ ರೆಡ್ಡಿ ಕಟ್ಟೆ ಬಾರೆಯ ಮೂರಾರ್ಜಿ ಸ್ಕೂಲ್ ಮಂಭಾಗದ ಹೊಳವನಹಳ್ಳಿ-ಕೊರಟಗೆರೆ ರಸ್ತೆಯಲ್ಲಿ ನಡೆದಿದೆ.

Advertisement

ಕೊರಟಗೆರೆ ಪಟ್ಟಣದ ಕೋಟೆ ಬೀದಿ ನಿವಾಸಿ  ಲೇಟ್ ಗುರುಮೂರ್ತಿಯವರ ಮಗ ಶಿವರಾಜು ಮೃತ ದುರ್ದೈವಿ. ಬೈಕ್ ಮೇಲಿಂದ ಬಿದ್ದಿದ್ದ ಈತನ ತಲೆಗೆ ತೀವ್ರ ಪೆಟ್ಟಾಗಿತ್ತು. ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ , ಅಲ್ಲಿನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆ ಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ.

ದೊಡ್ಡಬಳ್ಳಾಪುರ ತಾಲ್ಲೂಕಿನ ಗೌಡನಕುಂಟೆ ಗ್ರಾಮದ ಸಂಬಂಧಿಕರ ಮನೆಗೆ ಹೋಗಿ ಬರುವಾಗ ದುರ್ಘಟನೆ ನಡೆದಿತ್ತು. ಅತೀವೇಗ ಅಪಘಾತಕ್ಕೆ ಕಾರಣವಾಗಿತ್ತು. ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next