Advertisement

ಕೊರಟಗೆರೆ: ಬೈಕ್ ಗಳ ಮುಖಾಮುಖಿ; ಓರ್ವ ಸಾವು, ತಲೆ ಮರೆಸಿಕೊಂಡ ಇನ್ನೋರ್ವ

08:58 PM Aug 21, 2022 | Team Udayavani |

ಕೊರಟಗೆರೆ: ಎರಡು ಬೈಕ್ ಗಳ ನಡುವೆ ಅಪಘಾತ ಸಂಭವಿಸಿ ಯುವಕನೋರ್ವ ಸಾವಿಗೀಡಾಗಿ ಮತ್ತೋರ್ವ ಬೈಕ್ ಸವಾರ ಭಯದಿಂದ ತಲೆಮರೆಸಿಕೊಂಡಿರುವ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

Advertisement

ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯಲ್ಲಿ ಈ ದುರ್ಘಟನೆ ಜರಗಿದ್ದು, ವಜ್ಜಿನಕುರಿಕೆ ಗ್ರಾಮದ ಶಶಿಕುಮಾರ್ 30 ವರ್ಷ ಈತನು‌ ಬಾರ್ ಬೈಂಡಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಬೈಕ್ ಅಪಘಾತದಲ್ಲಿ ಸಾವಿಗೀಡಾದ ದುರ್ದೈವಿಯಾಗಿದ್ದಾನೆ.

ಮೃತ ಶಶಿಕುಮಾರ್ ವಜ್ಜಿನಕುರಿಕೆ ಗ್ರಾಮದ ಕಡೆಯಿಂದ ಕೊರಟಗೆರೆಗೆ ಬರುತ್ತಿರುವಾಗ ಇರಕಸಂದ್ರ ಕಾಲೋನಿ ಬಳಿಯ ಎಲೆರಾಂಪುರ ಕ್ರಾಸ್ ನ ತಿರುವಿನಲ್ಲಿ ಕೊರಟಗೆರೆ ಕಡೆಗೆ ಹೋಗುತ್ತಿದ್ದ ಮುತ್ತುರಾಜು ನಡುವೆ ಎರಡು ಬೈಕ್ ಗಳ ಮಧ್ಯೆ ಅಪಘಾತ ಸಂಭವಿಸಿ ಶಶಿಕುಮಾರ್ ತಲೆಗೆ ತೀವ್ರ ಪೆಟ್ಟಾಗಿ ಕೊರಟಗೆರೆ ಸಾರ್ವಜನಿಕ ಆಸ್ಪತ್ರೆ , ತುಮಕೂರು ಸಾರ್ವಜನಿಕ ಆಸ್ಪತ್ರೆ ನಂತರ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.

ಮೃತ ಶಶಿಕುಮಾರ್ ವಜ್ಜಿನಕುರಿಕೆ ಯಿಂದ ಕೊರಟಗೆರೆಗೆ ಬರುತ್ತಿರುವಾಗ ಇರಕಸಂದ್ರ ಕಾಲೋನಿ ಬಳಿ ತಿರುವಿನಲ್ಲಿ ಎದುರಿನಿಂದ ಬರುವ ದ್ವಿಚಕ್ರವಾಹನ ಕಾಣದೆ ಅಪಘಾತ ನಡೆದಿದೆ. ಹೊಸಹಳ್ಳಿ ಗ್ರಾಮದ ಮುತ್ತುರಾಜು ಸಣ್ಣಪುಟ್ಟ ಪೆಟ್ಟಾಗಿ ಶಶಿಕುಮಾರ್ ನ ಸಾವಿನ ಸುದ್ದಿ ಕೇಳಿ ಭಯದಿಂದ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಕೆ ಸುರೇಶ್ ಹಾಗೂ ಪಿಎಸ್ಐ ಮಹಾಲಕ್ಷ್ಮಮ್ಮ ಹೆಚ್ ಎನ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next