Advertisement

Koppala: ಮನೆಗೆ ಭೇಟಿ ನೀಡಿದ ಸಮಾಧಾನಕ್ಕಿಂತ ನಮಗೆ ನ್ಯಾಯ ಬೇಕು:ಮೃತ ಪಿಎಸ್ಐ ಪರಶುರಾಮ ಸಹೋದರ

03:44 PM Aug 07, 2024 | Team Udayavani |

ಕೊಪ್ಪಳ: ಗೃಹ ಸಚಿವರು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ. ವರದಿ ಬಂದ ಬಳಿಕ ಆರೋಪಿ ಯಾರೇ ಇರಲಿ ಅವರನ್ನು ಬಂಧಿಸುವೆವು ಎಂದಿದ್ದಾರೆ ಎಂದು ಸೋಮನಾಳದಲ್ಲಿ ಮೃತ ಪಿಎಸ್ಐ ಪರಶುರಾಮ ಅವರ ಸಹೋದರ ಹನುಮಂತಪ್ಪ ಹೇಳಿದ್ದಾರೆ.

Advertisement

ಸಿಓಡಿಯಿಂದ ನ್ಯಾಯ ಸಿಗಲಿಲ್ಲ ಎಂದರೆ ಮುಂದೆ ವಿಚಾರ ಮಾಡಿ ಎಂದಿದ್ದಾರೆ. ನಾವು ನಮ್ಮ ಕುಟುಂಬಕ್ಕೆ ನ್ಯಾಯ ಬೇಕು ಎಂದು ಒತ್ತಾಯ ಮಾಡಿದ್ದೇವೆ. ಸಿಓಡಿ ತನಿಖೆಯಿಂದ ನ್ಯಾಯ ಕೊಡಿಸುವೆವು ಎಂದಿದ್ದಾರೆ ಎಂದರು.

ನಮಗೆ ನ್ಯಾಯ ಮುಖ್ಯ. ನಮಗೆ 2 ಕೋಟಿ ಪರಿಹಾರ ಕೊಡಿ ಎಂದಿದ್ದೆವು. ನಮ್ಮ ಕುಟುಂಬ ಆರ್ಥಿಕ ಸ್ಥಿತಿ  ಸರಿಯಿಲ್ಲ. ಅವರು 50 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ ಎಂದ ಅವರು ನಮ್ಮ ಜೊತೆ ಮಾತನಾಡುವ ವೇಳೆ ಪರಿಹಾರದ ವಿಚಾರ ಮಾತನಾಡಿಲ್ಲ ಎಂದು ಹೇಳಿದರು.

ಮಾಧ್ಯಮದ ಮುಂದೆ 50 ಲಕ್ಷ ಪರಿಹಾರ ಕೊಡುವ ಹೇಳಿಕೆ ನೀಡಿದ್ದಾರೆ. ನಮಗೆ ಆರೋಪಿಗಳು ಬಂಧನ ಆಗಬೇಕು ಎಂದಿದ್ದೇವೆ. ಪರಿಹಾರದ ವಿಚಾರ ನಾವು ಗೃಹ ಸಚಿವರ ಜೊತೆಗೆ ಮಾತನಾಡುವೆವು. ಅವರು ಹುದ್ದೆ ಕೊಡುವ ಭರವಸೆ ನೀಡಿದ್ದಾರೆ. ಗೃಹ ಸಚಿವರು ನಮ್ಮ ಮನೆಗೆ ಭೇಟಿ ನೀಡಿದ ಸಮಾಧಾನಕ್ಕಿಂತ ನಮಗೆ ನ್ಯಾಯ ಬೇಕು ಎಂದಿದ್ದೇವೆ ಎಂದು ಹೇಳಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next