Advertisement

Koppala; ಗವಿಮಠದಲ್ಲಿ ಬೃಹತ್ ಕಾಯಕ ದೇವೋ ಭವ ಜಾಗೃತಿ ಜಾಥಾ

11:42 AM Jan 24, 2024 | Team Udayavani |

ಕೊಪ್ಪಳ: ಕೊಪ್ಪಳ ಗವಿಮಠದಿಂದ ಬೃಹತ್ ಕಾಯಕ ದೇವೋ ಭವ ಜಾಗೃತಿ ಜಾಥಾಗೆ ತಾಲೂಕು ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು. ಜಾಥಾಗೆ ಗವಿಶ್ರೀ, ಜಿಲ್ಲಾಧಿಕಾರಿ ನಲಿನ್ ಅತುಲ್ ಹಾಗೂ ಜಿಪಂ ಸಿಇಒ ರಾಹುಲ್ ರತ್ನಂ ಚಾಲನೆ ನೀಡಿದರು.

Advertisement

ಬೃಹತ್ ಜಾಥಾದಲ್ಲಿ 10-12 ಸಾವಿರ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಂಘ-ಸಂಸ್ಥೆಗಳ ಹಾಗೂ ಕೊಪ್ಪಳ ನಗರದ ಜನತೆ ಭಾಗಿಯಾಗಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳಿಂದಲೂ ಜಾಥಾಗೆ ಸಹಯೋಗ ನೀಡಲಾಗಿದ್ದು, ತಾಲೂಕು ಕ್ರೀಡಾಂಗಣದಿಂದ ಕೊಪ್ಪಳ ಗವಿಮಠದ ವರೆಗೂ ಸಾಗಿತು. ಜಾಥಾದಲ್ಲಿ ಗವಿಸಿದ್ದೇಶ್ವರರ ನಾಮ ಸ್ಮರಣೆ ಕಾಯಕಗಳ ಘೋಷಣೆ ಮೊಳಗಿಸಲಾಯಿತು.

ಈ ವರ್ಷದ ಜಾತ್ರೋತ್ಸದ ಪ್ರಯುಕ್ತ ಜಾಗೃತಿ ಜಾಥಾ ನಡೆಸಲಾಗಿದೆ. ಕಳೆದ ಹತ್ತು ವರ್ಷಗಳಿಂದ ಒಂದೊಂದು ವಿಷಯದಡಿ ಜ‌ನ ಜಾಗೃತಿ ಮಾಡಲಾಗುತ್ತದೆ.   ಜಾಥಾದುದ್ದಕ್ಕೂ ವಿದ್ಯಾರ್ಥಿಗಳಿಗೆ ತಂಪು ಪಾನೀಯ ವಿತರಣೆ ಮಾಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next