Advertisement

ಕೊಪ್ಪಳ: ತಾಪಂ ಸದಸ್ಯ ಚಂದ್ರಕಾಂತ ಅಕಾಲಿಕ ನಿಧನ

09:51 PM Sep 08, 2020 | mahesh |

ಕೊಪ್ಪಳ: ತಾಲೂಕಿನ ಕುಣಕೇರಿ ತಾಪಂ ಸದಸ್ಯ ಚಂದ್ರಕಾಂತ್ ನಾಯಕ ಅವರು (೩೮) ಮಂಗಳವಾರ ಅಕಾಲಿಕ ನಿಧನರಾಗಿದ್ದಾರೆ. ಬಿಜೆಪಿ ತಾಪಂ ಸದಸ್ಯರಾಗಿ ರಾಜಕೀಯ ಜೀವನ ಕಂಡುಕೊಂಡಿದ್ದ ಅವರು ಎಲ್ಲ ವರ್ಗದ ಜನರ ಒಡನಾಡಿಯಾಗಿದ್ದರು.

Advertisement

ಚಂದ್ರಕಾಂತ್ ಅವರು ಕೆಲ ತಿಂಗಳ ಹಿಂದೆ ಕಾಲಿಗೆ ಪೆಟ್ಟಾಗಿ ಚಿಕಿತ್ಸೆ ಪಡೆದು ಮನೆಯಲ್ಲಿ ತಿಂಗಳಿಗೂ ಹೆಚ್ಚುಕಾಲ ವಿಶ್ರಾಂತಿ ಪಡೆದಿದ್ದರು. ಈಚೆಗಷ್ಟೆ ಮತ್ತೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದರು. ಆದರೆ ಮಂಗಳವಾರ ಏಕಾ ಏಕಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಇಹಲೋಕ ತ್ಯಜಿಸಿದ್ದಾರೆ. ಮೃತರಿಗೆ ಸಂಸದ ಸಂಗಣ್ಣ ಕರಡಿ, ಬಿಜೆಪಿ ಮುಖಂಡರಾದ ಸಿ.ವಿ.ಚಂದ್ರಶೇಖರ, ಅಮರೇಶ ಕರಡಿ, ತೋಟಪ್ಪ ಕಾಮನೂರು ಸೇರಿ ಪಕ್ಷಾತೀತವಾಗಿ ಗಣ್ಯಾತೀತರು ಕಂಬನಿ ಮಿಡಿದಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next