Advertisement

Koppa; ಸಾಲಬಾಧೆ, ಒತ್ತುವರಿ ತೆರವಿನ ಆತಂಕ; ಆತ್ಮಹತ್ಯೆಗೆ ಶರಣಾದ ರೈತ

05:25 PM Oct 08, 2024 | Team Udayavani |

ಕೊಪ್ಪ (ಚಿಕ್ಕಮಗಳೂರು): ಸಾಲಬಾಧೆ ಮತ್ತು ಒತ್ತುವರಿ ತೆರವಿನ ಆತಂಕದಿಂದ ರೈತರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಮೇಗುಂದಾ ಹೋಬಳಿಯ ಮೇಗೂರಿನಲ್ಲಿ ನಡೆದಿದೆ.

Advertisement

ಕರುಣಾಕರ ಆತ್ಮಹತ್ಯೆಗೆ ಶರಣಾದ ರೈತ. ಅವರು ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿಕೊಂಡಿದ್ದರು. ಸ್ಥಳೀಯ ಸೊಸೈಟಿ, ಬ್ಯಾಂಕ್ ಮತ್ತು ಒಂದಷ್ಟು ಕೈಸಾಲ ಸಹ ಮಾಡಿಕೊಂಡಿದ್ದರು.

ಮಗಳ ಮದುವೆ ಸಹ ಮಾಡಬೇಕಾಗಿತ್ತು, ಇವರ ಬದುಕಿಗೆ ಜಮೀನಿನಿಂದ ಬರುತಿದ್ದ ಅಲ್ಪಸ್ವಲ್ಪ ಆದಾಯವೇ ಆಧಾರವಾಗಿತ್ತು ಎನ್ನಲಾಗಿದೆ. ಆದರೆ ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಾದ್ಯಂತ ಕೇಳುತ್ತಿದ್ದ ಒತ್ತುವರಿ ತೆರವು ವಿಷಯದ ಸುದ್ದಿ ಕೇಳಿ ಚಿಂತಿತರಾಗಿದ್ದರು. ತಾನು ಸ್ವಲ್ಪ ಪ್ರಮಾಣದ ಒತ್ತುವರಿ ಮಾಡಿದ್ದರಿಂದ ಸದ್ಯದಲ್ಲೇ ಆ ಒತ್ತುವರಿ ತೆರವು ಮಾಡಿಯೇ ಮಾಡುತ್ತಾರೆ, ಮಗಳ ಮದುವೆ ಆಗಿಲ್ಲ, ಸಾಲ ತೀರಿಸಲು ಬೇರೆ ದಾರಿ ಇಲ್ಲಾ ಎಂದೆಲ್ಲಾ ಕುಟುಂಬಸ್ಥರು ಹಾಗೂ ಸ್ಥಳೀಯರ ಬಳಿ ನೋವು ಹೇಳಿಕೊಂಡಿದ್ದರು.

ತುಂಬಾ ಚಿಂತಿತರಾಗಿದ್ದ ಕರುಣಾಕರ ಸೋಮವಾರ ದಿನ ಮನೆಯ ಹತ್ತಿರದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next