Advertisement

ಭಾರತೀಯ ರೈಲ್ವೇ ಜತೆ ಕೊಂಕಣ ರೈಲ್ವೇ ವಿಲೀನ: ಸಚಿವರಿಗೆ ಮನವಿ

12:21 AM Dec 20, 2022 | Team Udayavani |

ಕುಂದಾಪುರ: ಕೊಂಕಣ ರೈಲ್ವೇಯನ್ನು ಭಾರತೀಯ ರೈಲ್ವೇ ಜತೆಗೆ ವಿಲೀನಗೊಳಿಸುವ ಪ್ರಕ್ರಿಯೆ ಸಂಬಂಧ ರಾಜ್ಯಗಳ ವರದಿ ಕೇಳಲಾಗಿದೆ ಎಂದು ರೈಲ್ವೇ ಸಚಿವ ಅಶ್ವಿ‌ನಿ ವೈಷ್ಣವ್‌ ತಿಳಿಸಿದ್ದಾರೆ.

Advertisement

ಬೆಂಗಳೂರಿನನಲ್ಲಿ ಜೈ ಭಾರ್ಗವ ಬಳಗದ ಸಂಚಾಲಕ ಅಜಿತ್‌ ಶೆಟ್ಟಿ ಕಿರಾಡಿ ನೇತೃತ್ವದ ನಿಯೋಗವು ನೀಡಿದ ಮನವಿಯನ್ನು ಸ್ವೀಕರಿಸಿದ ಕೇಂದ್ರ ಸಚಿವರು ಈ ರೀತಿ ಪ್ರತಿಕ್ರಿಯಿಸಿದರು.

ಬಾಕೂìರಿನಲ್ಲಿ ನಿಲುಗಡೆ ಹೊಂದಿದ್ದ ಮುಂಬಯಿ – ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ರೈಲಿಗೆ ಮತ್ತೆ ನಿಲುಗಡೆ ಕಲ್ಪಿಸುವಂತೆಯೂ ಮನವಿ ಮಾಡಲಾಯಿತು. ಪರಿಶೀಲಿಸಿದ ಸಚಿವರು ಎರಡೂ ವಿಷಯಗಳನ್ನು ಶೀಘ್ರದಲ್ಲೇ ಅನುಷ್ಠಾನ ಗೊಳಿಸುವುದಾಗಿ ಭರವಸೆ ನೀಡಿದರು.

ಬಿಜೆಪಿ ಪ್ರಕಾಶನ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಅಜಿತ್‌ ಶೆಟ್ಟಿ ಹೆರಂಜೆ, ಜನಸೇವಾ ಟ್ರಸ್ಟ್‌ ಪ್ರವರ್ತಕ ವಸಂತ ಗಿಳಿಯಾರ್‌ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next