Advertisement

ಕೊಲ್ಲೂರು: ಸೌಪರ್ಣಿಕಾ ನದಿ ಸ್ವಚ್ಛತೆ

08:10 AM Mar 20, 2018 | |

ಕೊಲ್ಲೂರು: ಕುಂದಾಪುರದ ಯುವ ಬ್ರಿಗೇಡ್‌ ನೇತೃತ್ವದಲ್ಲಿ ಮಾ. 18ರಂದು ಕೊಲ್ಲೂರಿನ ಸೌಪರ್ಣಿಕಾ ನದಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

Advertisement

ಚಕ್ರವರ್ತಿ ಸೂಲೆಬೆಲೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಕ್ಷೇತ್ರ ತೀರ್ಥಸ್ನಾನಗಳ ಸ್ವಚ್ಛತೆಯ ಆಂದೋಲನಕ್ಕೆ ಕೊಲ್ಲೂರಿನ ಸೌಪರ್ಣಿಕ ನದಿಯನ್ನು  ಆಯ್ಕೆ ಮಾಡಲಾಗಿದ್ದು ಅದರಂತೆ ಕುಂದಾಪುರ ಡಾ| ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು,  ಗ್ರಾಮಸ್ಥರ ಸಹಕಾರದೊಡನೆ ಸ್ವಚ್ಛತಾ ಅಭಿಯಾನ ನಡೆಯಿತು. ಯುವ ಬ್ರಿಗೇಡ್‌ ಸಂಚಾಲಕ ರಾಮದಾಸ್‌, ಜಿಲ್ಲಾ  ಸಂಚಾಲಕ ಅದೀಪ್‌, ತಾ|  ಸಂಚಾಲಕರಾದ ರಾಹುಲ್‌ ,  ನಿರಂಜನ್‌, ವಿಶ್ವನಾಥ, ಅಮರ್‌, ರೋಹಿತ್‌,  ಪ್ರಶಾಂತ್‌, ನವೀನ್‌  ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 

ಈ ಸಂದರ್ಭ ಮಾತನಾಡಿದ ಸಂತೋಷ್‌ ಭಟ್‌, ನಿರಂಜನ್‌ ತಲ್ಲೂರ ಅವರು ಕ್ಷೇತ್ರಗಳ ಪವಿತ್ರ ನದಿಗಳ ನೀರಿನ ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೋರ್ವರೂ ಹೆಚ್ಚಿನ ಕಾಳಜಿ ವಹಿಸಿ ಶ್ರಮಿಸಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next