Advertisement

ಕೊಲ್ಲೂರು: ಭಕ್ತರಿಗೆ ನೀರಿನ ಕೊರತೆ ಆಗದಂತೆ ಕ್ರಮ

11:12 PM May 18, 2019 | Team Udayavani |

ಕೊಲ್ಲೂರು: ಇಲ್ಲಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವಸತಿ ಗೃಹಗಳಲ್ಲಿನ ಭಕ್ತರಿಗೆ ಯಾವುದೇ ರೀತಿಯಲ್ಲಿ ನೀರಿನ ಸಮಸ್ಯೆ ಎದುರಾಗ ಬಾರದು ಎಂಬ ನಿಟ್ಟಿನಿಂದ ನಾನಾ ಕಡೆಗಳಿಂದ ಸಂಗ್ರಹಿಸಲಾಗಿರುವ ನೀರನ್ನು ಟ್ಯಾಂಕರ್‌ ಮೂಲಕ ಒದಗಿಸಲಾಗುತ್ತಿದೆ. ಮಿತವಾಗಿ ನೀರು ಬಳಕೆ ಮಾಡುವಂತೆ ಭಕ್ತರಿಗೆ ಸೂಚಿಸಲಾಗಿದೆ. ಕ್ಷೇತ್ರ ದರ್ಶನಕ್ಕೆ ಆಗಮಿಸುವ ಭಕ್ತರಿಗೂ ದೇಗುಲದಲ್ಲಿ ಬಳಕೆಗೆ ಸಾಕಷ್ಟು ನೀರನ್ನು ವ್ಯವಸ್ಥೆಗೊಳಿಸಗಾಗಿದೆ.

Advertisement

ಈಗಾಗಲೇ ರೂ. 33.40 ಕೋಟಿ ಪರಿಷ್ಕೃತ ವೆಚ್ಚದ ಇಂಡಿಯಾ ಆಣೆಕಟ್ಟು ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಮುಂದಿನ ವರ್ಷದ ಮಳೆಗಾಲದಿಂದ ಕೊಲ್ಲೂರಿಗೆ ಎದುರಾಗಿರುವ ಬೇಸಿಗೆಯ ನೀರಿನ ûಾಮಕ್ಕೆ ಮುಕ್ತಿ ದೊರಕಲಿದೆ ಎಂದು ಕೊಲ್ಲೂರು ದೇಗುಲದ ಕಾರ್ಯನಿರ್ವಹಣಾ ಕಾರಿ ಎಚ್‌. ಹಾಲಪ್ಪ ಹಾಗೂ ಸಮಿತಿಯ ಅಧ್ಯಕ್ಷ ಹರೀಶ್‌ ಕುಮಾರ್‌ ಶೆಟ್ಟಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next