Advertisement

Kollegala ; ನೇಣು ಬಿಗಿದ ಸ್ಥಿತಿಯಲ್ಲಿ ಅಂಗನವಾಡಿ ಸಹಾಯಕಿ ಶವ ಪತ್ತೆ

10:46 PM Oct 28, 2023 | Team Udayavani |

ಕೊಳ್ಳೇಗಾಲ: ಗೃಹಿಣಿಯೋರ್ವಳು ನೇಣು ಬಿಗಿದ ಸ್ಥಿತಿಯಲ್ಲಿ ಅಂಗನವಾಡಿ ಸಹಾಯಕಿ ಪುಷ್ಪಾ(28) ಸಾವೀಗೀಡಾದ ಘಟನೆಯೊಂದು ತಾಲ್ಲೂಕಿನ ಕಾಮಗೆರೆ ಗ್ರಾಮದ ಅಂಬೇಡ್ಕರ್ ಬೀದಿಯಲ್ಲಿ ಶನಿವಾರ ಜರುಗಿದೆ.

Advertisement

ಕಳೆದ ಐದು ವರ್ಷಗಳ ಹಿಂದೆ ಕಾಮಗೆರೆ ಗ್ರಾಮದ ಶಿವರಾಜು ಎನ್ನುವರ ಜೊತೆ ಮದುವೆಯಾಗಿದ್ದು ಎರಡು ಹೆಣ್ಣು ಮಕ್ಕಳು ತಾಯಿಯಾಗಿದ್ದಾರೆ. ಈ ಸಂಬಂಧ ಪುಷ್ಪಾಳ ತಂದೆ ಗುಂಡೇಗಾಲ ಗ್ರಾಮದ ಚಿಕ್ಕಪುಟ್ಟಯ್ಯ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ದೂರಿನಲ್ಲಿ ಇದು ಆತ್ಮಹತ್ಯೆ ಅಲ್ಲ. ಮೃತ್ತಳು ಗಂಡ ಶಿವರಾಜು, ತಾಯಿ ದೊಡ್ಡಮ್ಮ, ದೊಡ್ಡಮ್ಮಳ ಮಗಳಾದ ಮಹದೇವಮ್ಮ ಹಾಗೂ ಶಿವರಾಜು ಸಹೋದರ ಚಂಗು ಇವರುಗಳು ಒಟ್ಟಾಗಿ ಸೇರಿ ನನ್ನ ಮಗಳನ್ನು ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಂತೆ ನಾಟಕ ಮಾಡಿದ್ದಾರೆ. ಈ ಕಾರಣಕ್ಕಾಗಿ ಈ ಐವರ ವಿರುದ್ದ ಕೊಲೆ ಪ್ರಕರಣ ದಾಖಲಿಸಿ ನ್ಯಾಯ ಕೊಡಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ನನ್ನ ಮಗಳು ಬದುಕಿದ್ದಾಗ ನನ್ನ ಬಳಿ ಬಂದು ಎರಡು ಹೆಣ್ಣು ಮಕ್ಕಳನ್ನು ಹೆತ್ತಿದ್ದೀಯಾ ಎಂದು ಗಂಡನ ಮನೆಯವರು ದೂಷಿಸಿ ಆಗಾಗ್ಗೆ ಮಾನಸಿಕ ಕಿರುಕುಳ ಕೊಡುತ್ತಿದ್ದರು ಎಂದು ತಿಳಿಸಿದ್ದರು. ಇದನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡು, ಆರೋಪಿ ಗಂಡ ಶಿವರಾಜುವನ್ನು ವಶಪಡಿಸಿಕೊಂಡು ವಿಚಾರಣೆ ಒಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next