Advertisement

Kollegala ಮದುವೆಯಾದ ಐದೇ ದಿನಕ್ಕೆ ನೇಣಿಗೆ ಶರಣಾದ ವ್ಯಕ್ತಿ

08:22 PM Jun 11, 2023 | Team Udayavani |

ಕೊಳ್ಳೇಗಾಲ: ಮದುವೆಯಾದ ಐದೇ ದಿನಕ್ಕೆ ವರನೊಬ್ಬ ತನ್ನ ಮನೆಯಲ್ಲಿ ಭಾನುವಾರ ನೇಣು ಬಿಗಿದುಕೊಂಡು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.

Advertisement

ಇಲ್ಲಿನ ಜಿ.ಪಿ.ಮಲ್ಲಪ್ಪಪುರಂ ಬಡಾವಣೆಯ ನಿವಾಸಿ ಬೇಸಾಯ ವೃತ್ತಿ ಮಾಡುತ್ತಿದ್ದ ಸತೀಶ್ ಬಾಬು (43) ಸಾವಿಗೀಡಾಗಿರುವ ಮೃತ ದುರ್ದೈವಿ.

ಮದುವೆಯಾಗಿ ಕೇವಲ ಐದೇ ದಿನಕ್ಕೆ ಸಾವನ್ನಪ್ಪಿರುವ ಘಟನೆಯನ್ನು ಕೇಳಿ ನಗರವೇ ಬೆಚ್ಚಿ ಬಿದ್ದಿದೆ. ಸತೀಶ್ ಬಾಬು ಹಾಗೂ ಚೆನ್ನಾಜಮ್ಮ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದರು. ಮದುವೆಯಾದ ಮೂರನೇ ದಿನಕ್ಕೆ ಕುಟುಂಬಸ್ಥರು ಒಟ್ಟಾಗಿ ಸೇರಿ ಸಾಂಪ್ರದಾಯದಂತೆ ಮೊದಲನೆಯ ರಾತ್ರಿ ಏರ್ಪಡಿಸಿದ್ದರು ಆ ಮೊದಲನೇ ರಾತ್ರಿ ಸತೀಶ್ ಬಾಬು ನನಗೆ ಅನಾರೋಗ್ಯ ಸಮಸ್ಯೆ ಇದೆ ಹಾಗಾಗಿ ಮೊದಲನೇ ರಾತ್ರಿ ಯಾವ ಸಾಂಪ್ರದಾಯಗಳು ಬೇಡವೆಂದು ಮನೆಯಲ್ಲಿ ಮಲಗಿದ್ದರು.

ನಂತರ ಎಂದಿನಂತೆ ಬೆಳಗ್ಗೆ ಎದ್ದು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದರು. ಅದಾದ ನಂತರ ಶನಿವಾರ ರಾತ್ರಿ ಮನೆಯಲ್ಲಿ ಊಟ ಮಾಡಿ ಮಲಗಿದ್ದು ಬೆಳಗ್ಗೆ ಎದ್ದು ಜಮೀನಿಗಳಿಗೆ ತೆರಳಿದ್ದರು ನಂತರ ಮನೆಯ ಕೊಠಡಿ ಒಳಗೆ ಹೋಗಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ .

ಮದುವೆಯಾದ ಮೊದಲರಾತ್ರಿಯೂ ಸಹ ನನ್ನ ಜೊತೆ ಯಾವುದೇ ದೇಹ ಸಂಪರ್ಕ ಮಾಡಿರಲಿಲ್ಲ. ಈ ಸಾವಿನ ಹಿಂದೆ ನನಗೆ ಹಲವಾರು ಅನುಮಾನಗಳಿವೆ ಹಾಗಾಗಿ ನನ್ನ ಗಂಡನ ಸಾವಿಗೆ ತಂದೆ ಲಿಂಗರಾಜು, ತಾಯಿ ಮಹದೇವಿ, ಸಂಬಂಧಿಕರಾದ ದೇವಾನಂದ್, ಪ್ರಕಾಶ್, ವಿಜಯಕುಮಾರ್ ಕಾರಣರಾಗಿದ್ದಾರೆ ಹಾಗಾಗಿ ಇವರುಗಳ ಮೇಲೆ ತನಿಖೆ ನಡೆಸಿ ನನಗೆ ನ್ಯಾಯ ಒದಗಿಸಿ ಕೊಡಬೇಕು ಎಂದು ಮೃತರ ಪತ್ನಿ ಟಿ ನರಸೀಪುರ ತಾಲ್ಲೂಕಿನ ಕನ್ನಹಳ್ಳಿ ಗ್ರಾಮದ ಚೆನ್ನಾಜಮ್ಮ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Advertisement

ಪೊಲೀಸರು ಶವವನ್ನು ಸರ್ಕಾರಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಒಪ್ಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next