Advertisement

ಕೊಳ್ಳೇಗಾಲ : ಮನೆ ಬೀಗ ಮುರಿದು ಲಕ್ಷಾಂತರ ರೂ. ನಗ-ನಗದು ಕಳವು

08:52 PM May 03, 2023 | Team Udayavani |

ಕೊಳ್ಳೇಗಾಲ: ನಗರದ ಡಾ.ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ಮನೆಯೊಂದರ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿದ್ದ ನಗದು ಮತ್ತು ಚಿನ್ನವನ್ನು ಬುಧವಾರ ಕದ್ದೊಯ್ದಿದ್ದಾರೆ.

Advertisement

ಮನೆಯ ನಿವಾಸಿ ಸ್ನೇಹಿತನ ಮದುವೆಗೆಂದು ಕುಟುಂಬ ಸಮೇತ ತೆರಳಿದ್ದ ವೇಳೆ ಕಳ್ಳರು ಮನೆಯ ಬೀಗ ಮುರಿದು ಮನೆಯಲ್ಲಿದ್ದ 7.50 ಲಕ್ಷ ನಗದು 1, 25 ಗ್ರಾಂ ಚಿನ್ನ ಅಪಹರಿಸಿದ್ದಾರೆ. ಮಧ್ಯಾಹ್ನ ಮನೆಗೆ ಬಂದು ವೀಕ್ಷಣೆ ಮಾಡಿದಾಗ ಮನೆಯ ಬೀಗ ಮುರಿದಿರುವುದನ್ನು ಕಂಡು ಗಾಬರಿಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ, ಹೆಚ್ಚುವರಿ ಪೋಲೀಸ್ ವರಿಷ್ಠಾ ಧಿಕಾರಿ, ಡಿ.ವೈಎಸ್.ಪಿ.,ಸಿ.ಪಿ.ಐ, ಮತ್ತು ಸಿಬಂದಿ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಶ್ವಾನದಳ, ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿರುವ ನಗರ ಠಾಣೆಯ ಪಿಎಸ್.ಐ. ಕಳ್ಳರ ಹುಡುಕಾಟಕ್ಕಿಳಿದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next