Advertisement

Kollegala: ಕಾರ್ಮಿಕ ಇಲಾಖೆಯ ಉಪನಿರ್ದೇಶಕರ ಮನೆ ಮೇಲೆ ಲೋಕಾಯುಕ್ತ ದಾಳಿ

02:48 PM Oct 30, 2023 | Team Udayavani |

ಕೊಳ್ಳೇಗಾಲ: ಬೆಂಗಳೂರಿನ ಕಾರ್ಮಿಕ ಇಲಾಖೆಯ (ಬೈಉರ್ ವಿಭಾಗ) ಉಪನಿರ್ದೇಶಕರ ಮನೆ ಮೇಲೆ ಆ.30ರ ಸೋಮವಾರ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತರು ನಗರದ ಬಿಡಾವಣೆಯಲ್ಲಿ ದಾಳಿ ನಡೆಸಿದ್ದಾರೆ.

Advertisement

ನಗರದ ಮೊಳೆಬಡಾವಣೆಯಲ್ಲಿರುವ ಉಪನಿರ್ದೇಶಕ ಶ್ರೀನಿವಾಸ್‌ ಅವರಿಗೆ ಸೇರಿದ ಎರಡು ಮನೆಗಳ ಮೇಲೆ ಮತ್ತು ಒಂದು ತೋಟದ ಮನೆಯ ಮೇಲೆ, ಶ್ರೀನಿವಾಸ್ ಅವರ ಭಾವ, ಮಾಜಿ ನಗರ ಸಭಾ ಸದಸ್ಯ ನಟರಾಜ ಅವರ ಸಹೋದರ ಮಾದೇಶ ರವರ ಮನೆ, ಅವರ ಸಂಬಂಧಿಕರ ಮನೆಗಳ ಮೇಲೆ ಸುಮಾರು 8 ಗಂಟೆಗೆ ದಾಳಿ ನಡೆಸಿದ್ದಾರೆ.

ಬೆಂಗಳೂರಿನಿಂದ ಬಂದ ಲೋಕಯುಕ್ತರು ಸುಮಾರು 3 ಗಂಟೆಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಮನೆಯಲ್ಲೂ ಶೋಧ ಮಾಡುತ್ತಿದ್ದಾರೆ. ಲೋಕಾಯುಕ್ತರು ಮನೆಯ ಮೇಲೆ ದಾಳಿ ಮಾಡಿದ್ದಾರೆ ಎಂಬ ಸುದ್ದಿ ಕೇಳಿ ಇಡೀ ಬಡಾವಣೆಯವರೇ ಸಂಬಂಧಿಕರ ಮನೆ ಮುಂದೆ ನಿಂತು ಗುಸು ಗುಸು ಮಾತನಾಡುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next