Advertisement

ಕಸಗೂಡಿಸುವ ವಿಚಾರಕ್ಕೆ ಜಗಳ: ಪತ್ನಿಯನ್ನು ಕೊಂದ ವೃದ್ಧ

01:13 PM Jan 12, 2021 | keerthan |

ವಿಜಯಪುರ: ಮನೆಯಲ್ಲಿ ಕಸ ಗೂಡಿಸುವ ಕ್ಷುಲ್ಲಕ ವಿಷಯಕ್ಕಾಗಿ ವೃದ್ಧ ಪತಿ-ಪತ್ನಿ ನಡುವೆ ಉಂಟಾದ ಜಗಳ ಪತ್ನಿ ಕೊಲೆಯಲ್ಲಿ ಅಂತ್ಯವಾದ‌ ದುರಂತ ಬಸವನಬಾಗೇವಾಡಿ ತಾಲೂಕಿನಲ್ಲಿ ಜರುಗಿದೆ.

Advertisement

ಇಂಗಳೇಶ್ವರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹತ್ಯೆಯಾದ ವೃದ್ಧೆಯನ್ನು ನಾಗಮ್ಮ (60) ಎಂದು ಗುರುತಿಸಲಾಗಿದೆ. ಹತ್ಯೆ ನಡೆಸಿದ ಪತಿ ಯಲ್ಲಪ್ಪ (65) ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಸ ಗೂಡಿಸುವ ವಿಷಯದಲ್ಲಿ ಪತಿಯ ಮಾತಿಗೆ ಪತ್ನಿ ಎದುರುತ್ತರ ನೀಡಿದ್ದರಿಂದ ರೊಚ್ಚಿಗೆದ್ದ ಪತಿ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

ಇದನ್ನೂ ಓದಿ:ಸರ್ಕಾರಕ್ಕೆ 48 ಗಂಟೆ  ಗಡುವು ನೀಡಿದ  ಪಂಚಮಸಾಲಿ ಸಮಾಜ

ಯಲ್ಲಪ್ಪ

Advertisement

ಸ್ಥಳಕ್ಕೆ ಬಸವನಬಾಗೇವಾಡಿ ಸಿಪಿಐ‌ ಸೋಮಶೇಖರ್ ಜುಟ್ಟಲ್ ಹಾಗೂ ಸಿಬ್ಬಂದಿ ಭೇಟಿ, ಮನಗೂಳಿ ಪೊಲೀಸ್ ಠಾಣಾ‌ ವ್ಯಾಪ್ತಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next