Advertisement

ಕೊಲ್ಲಾಪುರ ಮಹಾಲಕ್ಷ್ಮೀ ರಥೋತ್ಸವ

06:31 AM Feb 18, 2019 | Team Udayavani |

ಶಹಾಬಾದ: ನಗರದಲ್ಲಿ ರವಿವಾರ ರಾಮಾ  ಹಲ್ಲಾದಲ್ಲಿರುವ ಕೊಲ್ಲಾಪುರ ಮಹಾಲಕ್ಷ್ಮೀ ದೇವಿ ರಥೋತ್ಸವ ಸಂಗೀತಾ ಅಮ್ಮನವರ ನೇತೃತ್ವದಲ್ಲಿ ಜರುಗಿತು. ಶನಿವಾರ ಬೆಳಗ್ಗೆ ದೇವಿಗೆ ಕಾಕಡಾರತಿ, ಅಭೀಷೇಕ, ಅಲಂಕಾರ, ವೈದಿಕತ್ವದಲ್ಲಿ ಗಣಪತಿ ಹವನ, ಮಹಿಳೆಯರಿಂದ ಲಲಿತಾ ಸಹಸ್ರನಾಮ ಪಾರಾಯಣ, ಸತ್ಯನಾರಾಯಣ ಪೂಜೆ, ಮಹಾಪ್ರಸಾದ ವಿತರಣೆ, ಸಾಯಂಕಾಲ ವೇದಘೋಷ, ಮಂತ್ರಪುಷ್ಟ ನಡೆಯಿತು. ರಾತ್ರಿ 9 ಗಂಟೆಗೆ ಕಲಾವಿದ ಅನಂತ ಕುಲಕರ್ಣಿ ಬಾಗಲಕೋಟ, ಭದ್ರಿನಾಥ ಮುಡಬಿ ಹಾರ್ಮೋನಿಯಂ, ಜಯತೀರ್ಥ ಆದ್ಯ ಅವರಿಂದ ತಬಲಾ ಸೇವೆ ನಡೆಯಿತು.

Advertisement

ಗುರುವಾರ ಬೆಳಗ್ಗೆ ಮಹಾಲಕ್ಷ್ಮೀ ಹವನ, ಕುಂಕುಮಾರ್ಚನೆ, ಹವನದ ಪೂರ್ಣಾಹುತಿ ಭವ್ಯ ರಥೋತ್ಸವ ನಡೆಯಿತು. ಭಕ್ತರಿಗೆ ಪ್ರಸಾದ ವಿತರಣೆ, ಸಂಗೀತಾ ಅಮ್ಮನವರಿಂದ ಭಕ್ತರಿಗೆ ಪ್ರಸಾದ ವಿತರಣೆ, ಆಶೀರ್ವಚನ, ರಾತ್ರಿ 8 ಗಂಟೆಗೆ ತೊಟ್ಟಿಲು ಸೇವೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next