Advertisement

Kolhar; ಕಾರುಗಳ ನಡುವೆ ಭೀಕರ ಅಪಘಾತ: ನಾಲ್ವರಿಗೆ ಗಂಭೀರ ಗಾಯ

09:40 PM Aug 16, 2024 | Vishnudas Patil |

ಕೊಲ್ಹಾರ: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿ 4 ಜನರು ಗಂಭೀರವಾಗಿ ಗಾಯಗೊಂಡಿದ್ದು ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿರುವ ಘಟನೆ ಮುಳವಾಡ ಸಮೀಪದ ಬಸವೇಶ್ವರ ಶುಗರ್ ಫ್ಯಾಕ್ಟರಿ ಹತ್ತಿರ ಎನ್ ಎಚ್ 218 ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ(ಆ 16) ಮಧ್ಯಾಹ್ನ ನಡೆದಿದೆ

Advertisement

ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿ ಕೊಲ್ಹಾರ ತಾಲೂಕಿನ ಮಸೂತಿ ಮೂಲದ ಸುರೇಶ್ ಕೋಟಿ (ಕ್ವಾಟಿ) (40) ವಿಠ್ಠಲ ಕೋಟಿ(30) ಲಕ್ಷ್ಮೀಬಾಯಿ ಕೋಟಿ (37) ಸಕ್ಕುಬಾಯಿ ಕೋಟಿ (39) ಇವರೆಲ್ಲ ಗಂಭೀರವಾಗಿ ಗಾಯಗೊಂಡಿದ್ದು, ಮುತ್ತವ್ವ ಕೋಟಿ (68) ತಾನಾಜಿ ಕೋಟಿ (30) ಭವಾನಿ ಕೋಟಿ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳುಗಳನ್ನು ವಿಜಯಪುರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.  ಬಬಲೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next