Advertisement

ಕೊಲ್ಹಾಪುರ ತುಳುಕೂಟ: ವಾರ್ಷಿಕೋತ್ಸವ, ಸಮ್ಮಾನ

04:48 PM Mar 09, 2018 | |

ಉಡುಪಿ: ಕೊಲ್ಹಾಪುರ ಮತ್ತು ಅದರ ಆಸುಪಾಸಿನ ಊರಾದ ಇಚಲಕರಂಜಿ ಹಾಗೂ ಜೈಸಿಂಗ್‌ಪುರದ ತುಳು ಕನ್ನಡ ಬಾಂಧವರ ಸಂಘಟನೆಯಾದ ಕೊಲ್ಹಾಪುರ ತುಳುಕೂಟದ 6ನೇ ವಾರ್ಷಿಕೋತ್ಸವವು ಶ್ರೀ ಗಣೇಶ್‌ ಮಲ್ಟಿಪರ್ಪಸ್‌ ಲಾನ್‌ ಮತ್ತು ಹಾಲ್‌ನಲ್ಲಿ ಜರಗಿತು.

Advertisement

ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೊಡಿಯಾಲ್‌ಗ‌ುತ್ತು ಅಜಿತ್‌ ಕುಮಾರ್‌ ರೈ ಅವರು ವಹಿಸಿದ್ದರು. ಪತ್ನಿ ಡಾ| ಆಶಾ ಜ್ಯೋತಿ ರೈ ಅವರು ಅತಿಥಿಯಾಗಿ ಮಹಿಳಾ ಶಕ್ತಿಯನ್ನು ಪ್ರಶಂಸಿಸಿದರು.

ಅತಿಥಿಗಳಾಗಿ ಮುಂಬಯಿ ಬಂಟ್ಸ್‌ ಎಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸುರೇಂದ್ರ ಶೆಟ್ಟಿ, ಕರ್ನಾಟಕ ತುಳುನಾಡ ಸಂಘ ಸಾಂಗ್ಲಿ ಅಧ್ಯಕ್ಷ ಉಮೇಶ್‌ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಮಾಜಿ ಅಧ್ಯಕ್ಷ ವಿಟuಲ್‌ ಹೆಗ್ಡೆ, ತುಳುಕೂಟದ ಅಧ್ಯಕ್ಷ ತ್ಯಾಗರಾಜ್‌ ಶೆಟ್ಟಿ, ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮತ್ತು ಮಹಿಳಾ ವಿಭಾಗದ ಅಧ್ಯಕ್ಷೆ ಆಶಾಲತಾ ಎಸ್‌. ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾಜಿ ಲಯನ್‌ ಜಿಲ್ಲಾ ಗವರ್ನರ್‌ ಹಾಗೂ ಪೆರ್ಮೆದ ತುಳುವೆ ಬಿರುದನ್ನು ಪಡೆದ ದಿವಾಕರ್‌ ಶೆಟ್ಟಿ ಮತ್ತು ಜ್ಯೋತಿ ದಿವಾಕರ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. 

ಇದೇ ವೇಳೆ ತುಳುಕೂಟದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.ಮಹಿಳಾ ವಿಭಾಗದ ಕಾರ್ಯದರ್ಶಿ ಸಂಧ್ಯಾ ವಿಜಯ್‌ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ಪ್ರಭಾಕರ್‌ ಶೆಟ್ಟಿ  ವರದಿಯನ್ನು ಮಂಡಿಸಿದರು. ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆ ವಿಜಯಲಕ್ಷ್ಮೀ ಆರ್‌. ಶೆಟ್ಟಿ ಸಮ್ಮಾನ ಪತ್ರವನ್ನು ವಾಚಿಸಿದರು. ರಾಜೇಶ್‌ ಶೇರಿಗಾರ್‌ ಪಡುಬಿದ್ರಿ  ಕಾರ್ಯಕ್ರಮ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next