Advertisement
ನ.13 ರಂದು ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿ ಕುರುಡುಮಲೆ ಗಣೇಶ, ಇನ್ನಿತರ ದೇಗುಲ, ಚರ್ಚ್, ದರ್ಗಾ ಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವುದು, ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆಯನ್ನು ಪರೋಕ್ಷವಾಗಿ ಖಚಿತಪಡಿಸುತ್ತಿದೆ.
Related Articles
Advertisement
ಆದರೆ, ರಾಹುಲ್ ಗಾಂಧಿ ಪಾದಯಾತ್ರೆಯಲ್ಲಿ ಕೆ.ಎಚ್. ಮುನಿಯಪ್ಪ ಪುಟಿದೆದ್ದರು. ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾದ ನಂತರ ಪಕ್ಷದಲ್ಲಿ ತಮ್ಮ ಸ್ಥಾನ ಮಾನವನ್ನು ಗಟ್ಟಿಗೊಳಿಸಿಕೊಂಡರು. ಎಐಸಿಸಿ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡರು. ಇದೀಗ ಮತ್ತದೇ ಹುಮ್ಮಸ್ಸಿ ನಿಂದ ವಿರೋಧಿ ಬಣಕ್ಕೆ ಟಾಂಗ್ ನೀಡಲು ಸಜ್ಜಾಗುತ್ತಿ ದ್ದಾರೆ. ಇದೇ ಅವಧಿಯಲ್ಲಿ ರಮೇಶ್ಕುಮಾರ್ ಬಣ ಹಿನ್ನೆಡೆ ಅನುಭವಿಸಿದಂತೆ ಕಾಣಿಸುತ್ತಿದೆ.
ಸಿದ್ದರಾಮಯ್ಯಗೆ ಆಹ್ವಾನ: ಕಾಂಗ್ರೆಸ್ ಗುಂಪುಗಳ ಸಂಘರ್ಷ ಪರಾಕಾಷ್ಠೆ ತಲುಪಿರುವ ಈ ಸನ್ನಿವೇಶದಲ್ಲಿ ರಮೇಶ್ಕುಮಾರ್ ನೇತೃತ್ವದ ಗುಂಪು ಕೆ.ಎಚ್.ಮುನಿಯಪ್ಪ ತಂಡದ ವಿರೋಧವನ್ನು ಹಿಮ್ಮೆಟ್ಟಿಸುವ ಮಾರ್ಗೋಪಾಯಗಳನ್ನು ಹುಡುಕುತ್ತಿತ್ತು. ಆಗ ಹೊಳೆದಿದ್ದೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ವಿಚಾರ. ಅಹಿಂದ ಮತದಾರರು ಹೆಚ್ಚಾಗಿರುವ ಕೋಲಾರ ಕ್ಷೇತ್ರ ದಿಂದ ಸಿದ್ದರಾಮಯ್ಯ ಸ್ಪರ್ಧಿಸಿದರೆ ಕೆ.ಎಚ್.ಮುನಿಯಪ್ಪರ ವಿರೋಧವನ್ನು ಸಮರ್ಥವಾಗಿ ಹಿಮ್ಮೆಟ್ಟಿಸಬಹುದು ಎಂಬ ರಾಜಕೀಯ ಲೆಕ್ಕಾಚಾರದಲ್ಲಿ ರಮೇಶ್ಕುಮಾರ್, ಎಸ್.ಎನ್. ನಾರಾಯಣಸ್ವಾಮಿ ಇದ್ದಾರೆ ಎನ್ನುವುದು ಜಿಲ್ಲೆಯ ಮನೆ ಮಾತಾಗಿದೆ.
ಈವರೆಗಿನ ಬೆಳವಣಿಗೆಗಳಲ್ಲಿ ಸಿದ್ದರಾಮಯ್ಯರನ್ನು ಕೋಲಾರದಿಂದ ಸ್ಪರ್ಧಿಸುವಂತೆ ಆಹ್ವಾನಿಸುವಲ್ಲಿ ರಮೇಶ್ಕುಮಾರ್ ಗುಂಪು ತೋರಿಸಿದ್ದ ಅತ್ಯುತ್ಸಾಹವನ್ನು ಕೆ.ಎಚ್.ಮುನಿಯಪ್ಪ ಗುಂಪು ತೋರಿಸಿಯೇ ಇಲ್ಲ. ಸಿದ್ದರಾಮಯ್ಯ ಸ್ಪರ್ಧೆ ಕುರಿತು ತಮಗೇನೂ ಗೊತ್ತೇ ಇಲ್ಲವೆಂದು ಇತ್ತೀಚಿಗೆ ಸುದ್ದಿಗೋಷ್ಠಿಯಲ್ಲಿ ಕೆ.ಎಚ್.ಮುನಿಯಪ್ಪ ಘೋಷಿಸಿ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಿದ್ದರು.
ಪರ ವಿರುದ್ಧ ನಿಲುವು: ಇಂತ ಸನ್ನಿವೇಶದಲ್ಲೂ ನ.13 ಕೋಲಾ ರಕ್ಕೆ ಸಿದ್ದರಾಮಯ್ಯ ಭೇಟಿ ನೀಡುವುದು ಬಹುತೇಕ ಖಚಿತ ವಾಗಿದೆ. ಆದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನಾ ಸಮಾರಂಭದವರೆವಿಗೂ ಒಗ್ಗೂಡದ ಕೋಲಾ ರದ ಕಾಂಗ್ರೆಸ್ ಗುಂಪುಗಳು ಸಿದ್ದರಾಮಯ್ಯರನ್ನು ಹೇಗೆ ಸ್ವಾಗತಿಸುತ್ತವೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.
ಒಡಕಿನ ಮನೆಯಲ್ಲಿ ಒಗ್ಗಟ್ಟು ಸಾಧ್ಯವೇ?
ಸಿದ್ದರಾಮಯ್ಯ ಸ್ಪರ್ಧೆ ಕಾರಣಕ್ಕೆ ಜೆಡಿಎಸ್ ಕೋಲಾರದಿಂದ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಸಿದ್ದರಾಮಯ್ಯರಿಗೆ ಪೈಪೋಟಿ ನೀಡುವ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಬಿಜೆಪಿ ವರ್ತೂರು ಪ್ರಕಾಶ್ ಮೂಲಕ ಬಲಗೊಳ್ಳುತ್ತಿದೆ. ಇಂತ ಸಂದರ್ಭದಲ್ಲಿ ಸಿದ್ದರಾಮಯ್ಯರಿಗೆ ವಿರೋಧ ಪಕ್ಷಗಳ ತಂತ್ರಗಾರಿಕೆಯತ್ತ ಚಿತ್ತ ಹರಿಸದಷ್ಟು ಸಮಸ್ಯೆ ಸವಾಲುಗಳು ಸ್ವಂತ ಪಕ್ಷದಲ್ಲಿಯೇ ಸೃಷ್ಟಿಯಾಗಿದೆ. ಕೆ.ಎಚ್.ಮುನಿಯಪ್ಪ ಮತ್ತು ರಮೇಶ್ಕುಮಾರ್ ಅವರನ್ನು ಎಡ ಬಲಕ್ಕಿಟ್ಟುಕೊಂಡು ನ.13 ರ ಪ್ರವಾಸ ಮಾಡಿದರೆ ಮಾತ್ರವೇ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಒಗ್ಗಟ್ಟಿನ ಸಂದೇಶ ರವಾನಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ಒಡಕಿನ ಮನೆಯಲ್ಲಿ ಓಡಾಟ ಮಾಡಿದಂತಿರುತ್ತದೆ.
ಸಿದ್ಧು ಮುಂದೆ ಹಲವು ಸವಾಲು ಕೆ.ಶ್ರೀನಿವಾಸಗೌಡ ಜೆಡಿಎಸ್ನಿಂದ ದೂರವಾದ ನಂತರ ಅವರ ಬೆಂಬಲಿಗರ ಪೈಕಿ ಕೆಲವರು ಕಾಂಗ್ರೆಸ್ ಬಾವುಟ ಹಿಡಿಯಬಹುದು. ಹಾಗೆಯೇ ವರ್ತೂರು ಪ್ರಕಾಶ್ ಬಿಜೆಪಿಗೆ ಹೋಗಿರುವುದರಿಂದ ಕಾಂಗ್ರೆಸ್ ಹಳೆ ಗುಂಪು ಬಿಜೆಪಿ ಗುಂಪಾಗಿ ಬದಲಾಗಿ ಬಿಟ್ಟಿದೆ. ಇಂತ ಸ್ಥಿತಿಯಲ್ಲಿ ರಮೇಶ್ಕುಮಾರ್ ಆಗಲಿ, ಕೆ.ಎಚ್.ಮುನಿಯಪ್ಪ ಆಗಲಿ ತಾವು ಸಿದ್ದರಾಮಯ್ಯರನ್ನು ಗೆಲ್ಲಿಸಿಯೇ ಬಿಡುತ್ತೇವೆ ಎಂದು ಧೈರ್ಯದಿಂದ ಹೇಳುವ ವಾತಾವರಣ ಕೋಲಾರದಲ್ಲಿಲ್ಲ. ಆದರೆ, ಅಹಿಂದ ಮತದಾರರೇ ನಿರ್ಣಾಯಕವಾಗಿರುವ ಕೋಲಾರದಲ್ಲಿ ಪಕ್ಷವನ್ನು ಮೀರಿ ಸಿದ್ದರಾಮಯ್ಯರ ಪರ ಅಭಿಮಾನ ಮತ್ತು ಒಲವಿರುವ ಮತದಾರರ ಸಂಖ್ಯೆ ಹೆಚ್ಚಿದೆ. ಆದರೆ,ಅಭಿಮಾನವನ್ನು ಮತಗಳಾಗಿ ಮಾರ್ಪಡಲು ಪರ ವಿರೋಧಿ ಗುಂಪುಗಳು ಬಿಡುತ್ತವೆಯೇ? ಎಂಬ ಪ್ರಶ್ನೆಯಿದ್ದು, ಪ್ರಸ್ತುತ ಹಲವು ಸವಾಲುಗಳು ಸಿದ್ದರಾಮಯ್ಯ ಅವರ ಮುಂದಿದೆ.
ಮುಂದಿನ ದಿನಗಳಲ್ಲಿ ಸಮಯ ಸಂದರ್ಭ ಬಂದಾಗ ಇಬ್ಬರು (ಕೆ.ಎಚ್.ಮುನಿಯಪ್ಪ ಜೊತೆ )ಒಟ್ಟಾಗಿ ಕಾಣಿಸಿಕೊಳ್ತೀವಿ. ●ರಮೇಶ್ಕುಮಾರ್
ಸಿದ್ದರಾಮಯ್ಯ ರಾಜ್ಯದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು, ಕೋಲಾರದಿಂದ ಸ್ಪರ್ಧಿಸುತ್ತಿರುವುದು ತಮಗೇನೂ ಗೊತ್ತಿಲ್ಲ. ಪಕ್ಷದಲ್ಲಿ ಚರ್ಚೆಯೂ ಆಗಿಲ್ಲ. ● ಕೆ.ಎಚ್.ಮುನಿಯಪ್ಪ
●ಕೆ.ಎಸ್.ಗಣೇಶ್