Advertisement

ಬಡವರಿಗೆ ಸಂಘ ಸಂಸ್ಥೆಗಳು ಸಹಕರಿಸಲಿ

06:14 PM Jun 02, 2021 | Team Udayavani |

ಬಂಗಾರಪೇಟೆ: ಪಟ್ಟಣದ ಮುನಿಯಮ್ಮ ಬಡಾವಣೆಯಲ್ಲಿ ಸಮಾಜ ಸೇವಕಿ ವೀಣಾ ವೆಂಕಟೇಶ್‌ಮತ್ತು ಅವರ ಸ್ನೇಹಿತರು ನೀಡಿದ್ದ ಆಹಾರ ಕಿಟ್‌ಗಳನ್ನು ತಹಶೀಲ್ದಾರ್‌ ಎಂ.ದಯಾನಂದ್‌ ಬಡವರಿಗೆ ವಿತರಿಸಿದರು.

Advertisement

ಈ ವೇಳೆ ಮಾತನಾಡಿದ ತಹಶೀಲ್ದಾರ್‌, ಕೊರೊನಾ, ಲಾಕ್‌ಡೌನ್‌ ಸಮಯದಲ್ಲಿ ಎಲ್ಲವನ್ನೂಸರ್ಕಾರವೇ ನಿರ್ವಹಿಸಲು ಸಾಧ್ಯವಿಲ್ಲ, ಸಂಘಸಂಸ್ಥೆಗಳು ಮುಂದೆ ಬಂದು ಆಹಾರ, ಔಷಧಿ,ಮುಂತಾದವುಗಳನ್ನು ವಿತರಿಸಿ ಬಡವರ ಕಷ್ಟಕ್ಕೆಸ್ಪಂದಿಸಬೇಕು ಎಂದು ಹೇಳಿದ ಅವರು, ಮುನಿಯಮ್ಮ ಬಡಾವಣೆಯಲ್ಲಿ ಸಮಾಜ ಸೇವಕಿ ವೀಣಾವೆಂಕಟೇಶ ಮತ್ತು ಸಮಾನ ಮನಸ್ಕರು 120 ಜನರಿಗೆ ಆಹಾರ ಕಿಟ್‌ ವಿತರಿಸಿರುವುದು ಶ್ಲಾಘನೀಯ ಎಂದರು.

ಈ ವೇಳೆ ಪಿಕಾರ್ಡ್‌ ಬ್ಯಾಂಕಿನ ಅಧ್ಯಕ್ಷ ಎಚ್‌.ಕೆ.ನಾರಾಯಣಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್‌, ಬಡಾವಣೆಯ ಮುಖಂಡರಾದ ಖಾದರ್‌ಬಾಷ, ಶಿವು, ಸಂತೋಷ್‌, ವರುಣ್‌,ಪುರಸಭೆ ಮಾಜಿ ಸದಸ್ಯ ರಮೇಶ್‌, ಅಂಜನ್‌,ಬಾಲ, ಮಣಿ, ನೀತು, ಪ್ರಕಾಶ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next