Advertisement

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

09:02 PM May 16, 2024 | Team Udayavani |

ಕೋಲಾರ: ಸಹಜ ಹೆರಿಗೆಯಾದ ಬಳಿಕ ನಡೆಸಿದ ಪುಟ್ಟ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ದೇಹದಲ್ಲೇ ಬಟ್ಟೆಯನ್ನು ಉಳಿಸಿ ಮನೆಗೆ ಕಳುಹಿಸಲಾಗಿದೆ ಎಂಬ ಆರೋಪ ಸರಕಾರಿ ಆಸ್ಪತ್ರೆ ವೈದ್ಯೆ ವಿರುದ್ಧ ಕೇಳಿಬಂದಿದೆ.

Advertisement

ಮಾಲೂರು ತಾಲೂಕು ರಾಮಸಾಗರದ ಚಂದ್ರಿಕಾ ಎಂಬವರು ಮೇ 5ರಂದು ನಗರದ ಜಿಲ್ಲಾಸ್ಪತ್ರೆಗೆ  ದಾಖಲಾಗಿ, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆ ಸಂದರ್ಭ ರಕ್ತಸ್ರಾವ ತಡೆಗೆ ವೈದ್ಯರು ಚಿಕಿತ್ಸೆ ನಡೆಸಿದ್ದಾರೆ. ಆಸ್ಪತ್ರೆಯಿಂದ ಮನೆಗೆ ಹೋಗಿ 3-4 ದಿನಗಳ ಬಳಿಕ ಮಹಿಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಚಿಕಿತ್ಸೆಗಾಗಿ ನಗರದ ಖಾಸಗಿ ನರ್ಸಿಂಗ್‌ ಹೋಂ ವೈದ್ಯರ ಬಳಿ ತೋರಿಸಿದ್ದಾರೆ. ಆಗ ಗಾಯಕ್ಕೆ ಕ್ರೀಮ್‌ ಹಚ್ಚುವ ಸಮಯದಲ್ಲಿ ಬಟ್ಟೆ ಕಂಡುಬಂದಿದೆ ಎಂದು ಚಂದ್ರಿಕಾ ಕುಟುಂಬಸ್ಥರು ದೂರಿದ್ದಾರೆ.

ಹೆರಿಗೆ ಮಾಡಿಸುವ ವೇಳೆ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಜಿಲ್ಲಾ ಶಸ್ತ್ರಚಿಕಿತ್ಸಕರ ಗಮನಕ್ಕೆ ತಂದಾಗ ಅವರೂ ನಿರ್ಲಕ್ಷ್ಯದ ಉತ್ತರ ನೀಡಿದ್ದಾರೆ ಎಂದು ಚಂದ್ರಿಕಾ ಪತಿ ರಾಜೇಶ್‌ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next