Advertisement

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

07:37 PM Mar 28, 2024 | Team Udayavani |

ಬೆಳ್ತಂಗಡಿ: ಮೇಯಲೆಂದು ತೋಟದಲ್ಲಿ ಕಟ್ಟಿ ಹಾಕಿದ್ದ ದನ ಕಾಣೆಯಾಗಿರುವ ಕುರಿತು ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

ಕೊಕ್ಕಡ ಗ್ರಾಮದ ಬೆಳ್ತಂಗಡಿ ನಿವಾಸಿ ಶಿವಪ್ರಸಾದ್‌ ಎಂಬವರು ಮಾ. 25ರಂದು ಬೆಳಗ್ಗೆ ತನ್ನ ದನವನ್ನು ಕೊಕ್ಕಡ ಶಬರಾಡಿ ಎಂಬಲ್ಲಿರುವ ತನ್ನ ತೋಟದಲ್ಲಿ ಕಟ್ಟಿ ಹಾಕಿದ್ದರು. ಬಳಿಕ ಮಧ್ಯಾಹ್ನ ತೋಟಕ್ಕೆ ಬಂದು ನೋಡುವಾಗ ದನವು ಅಲ್ಲಿರಲಿಲ್ಲ. ಈ ಬಗ್ಗೆ ಹುಡುಕಾಡಿದರೂ ಇದುವರೆಗೂ ದನವು ಎಲ್ಲೂ ಪತ್ತೆಯಾಗಿಲ್ಲ. ಕಳವಾದ ದನದ ಅಂದಾಜು ಮೌಲ್ಯ 20,000 ರೂ. ಎಂದು ಅಂದಾಜಿಸಲಾಗಿದೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next