Advertisement

ಕೊಡೇರಿ ದೋಣಿ ದುರಂತ: ಸಮುದ್ರ ಪಾಲಾಗಿದ್ದ ನಾಲ್ವರು ಮೀನುಗಾರರ ಮೃತದೇಹ ಪತ್ತೆ

11:16 PM Aug 17, 2020 | Hari Prasad |

ಉಪ್ಪುಂದ: ಮೀನುಗಾರಿಕೆ ಮುಗಿಸಿ ವಾಪಾಸಾಗುತ್ತಿದ್ದ ನಾಡದೋಣಿಯೊಂದು ಭಾರೀ ಗಾಳಿಯಿಂದ ನಿಯಂತ್ರಣ ತಪ್ಪಿ ಇಲ್ಲಿನ ಬ್ರೇಕ್ ವಾಟರ್ ಗೆ ಢಿಕ್ಕಿ ಹೊಡೆದು ಮುಳುಗಿದ ದುರ್ಘಟನೆಯಲ್ಲಿ ಸಮುದ್ರಪಾಲಾಗಿದ್ದ ನಾಲ್ವರು ಮೀನುಗಾರರ ಮೃತದೇಹ ಇಂದು ಪತ್ತೆಯಾಗಿದೆ.

Advertisement

ದೋಣಿ ದುರಂತದಲ್ಲಿ ಸಮುದ್ರದ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ನಾಲ್ವರು ಮೀನುಗಾರರಾದ ನಾಗ ಖಾರ್ವಿ, ಲಕ್ಷ್ಮಣ ಖಾರ್ವಿ, ಶೇಖರ್ ಖಾರ್ವಿ ಹಾಗೂ  ಮಂಜುನಾಥ್ ಖಾರ್ವಿ ಅವರು ಸಾವನ್ನಪ್ಪಿದ್ದಾರೆ.

ನಾಗ ಖಾರ್ವಿ ಅವರ ಮೃತದೇಹ ಬೆಳಗ್ಗೆ ಪತ್ತೆಯಾಗಿದ್ದರೆ, ಮತ್ತೆ ಉಳಿದ ಮೂವರ ಶವ ಸೋಮವಾರ ರಾತ್ರಿ ಪತ್ತೆಯಾಗಿದೆ.

ಉಳಿದ ಮೂವರಿಗಾಗಿ ಬೆಳಗ್ಗೆಯಿಂದ ಶೋಧ ಕಾರ್ಯ ನಡೆಯುತ್ತಿತ್ತು.

ಇದನ್ನೂ ಓದಿ: ಕುಂದಾಪುರದ ಕೊಡೇರಿಯಲ್ಲಿ ದೋಣಿ ದುರಂತ: ನಾಲ್ವರು ಮೀನುಗಾರರು ನಾಪತ್ತೆ

Advertisement

ಈ ಶೋಧಕಾರ್ಯದಲ್ಲಿ ಸ್ಥಳೀಯ ಮೀನುಗಾರರು ಮತ್ತು ಕರಾವಳಿ ಕಾವಲು ಪಡೆಯ ಪೊಲೀಸರು ಇಂದು ಬೆಳಿಗ್ಗೆಯಿಂದಲೇ ತಮ್ಮನ್ನು ತೊಡಗಿಸಿಕೊಂಡಿದ್ದರು.

ಘಟನೆಯ ವಿವರ:
‘ಸಾಗರ್ ಶ್ರೀ’ ಹೆಸರಿನ ನಾಡದೋಣಿಯೊಂದು ಮೀನುಗಾರಿಕೆ ಮುಗಿಸಿಕೊಂಡು ರವಿವಾರ ಅಪರಾಹ್ನ ವಾಪಾಸಾಗುತ್ತಿದ್ದ ಸಂದರ್ಭದಲ್ಲಿ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಸಮೀಪ ಸಮುದ್ರ ತೀರದಲ್ಲಿ ಬ್ರೇಕ್ ವಾಟರ್ ಗೆ ಢಿಕ್ಕಿ ಹೊಡೆದು ಮುಳುಗಿತ್ತು.

ಈ ದೋಣಿಯಲ್ಲಿ 12 ಜನ ಮೀನುಗಾರರಿದ್ದರು. ದುರ್ಘಟನೆ ಸಂಭವಿಸಿದ ತಕ್ಷಣ 8 ಮಂದಿ ಅದೃಷ್ಟವಶಾತ್ ಈಜಿ ದಡಸೇರುವಲ್ಲಿ ಸಫಲರಾಗಿದ್ದರು.

ಆದರೆ, ಉಪ್ಪುಂದ ಗ್ರಾಮದ ಕರ್ಕಿಕಳಿ ನಿವಾಸಿಗಳಾದ ಬಿ. ನಾಗ, ಲಕ್ಷ್ಮಣ, ಶೇಖರ ಜಿ., ಮಂಜುನಾಥ ಎಂಬ ನಾಲ್ವರು ದುರದೃಷ್ಟವಶಾತ್ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದರು.

ಈ ದುರ್ಘಟನೆಯಲ್ಲಿ, ಉಪ್ಪುಂದ ಗ್ರಾಮದ ಜನತಾ ಕಾಲನಿಯ ನಿತ್ಯಾನಂದ, ಮಹಾಬಲ, ಫಿಶರೀಸ್ ಕಾಲನಿಯ ಚಂದ್ರ, ಕರ್ಕಿಕಳಿಯ ಸತೀಶ್, ಅಣ್ಣಪ್ಪ, ವೆಂಕಟರಮಣ, ಜನಾರ್ಧನ ಮತ್ತು ಚಂದ್ರಶೇಖರ ಅವರು ಜೀವಸಹಿತ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next