Advertisement

ಇಂದಿನಿಂದ ‘ಕೊಡೆಮುರುಗ’ನ ಆಟ ಶುರು

09:58 AM Apr 09, 2021 | Team Udayavani |

ಕಳೆದ ಕೆಲ ತಿಂಗಳಿನಿಂದ ತನ್ನ ಟ್ರೇಲರ್‌ ಮೂಲಕವೇ ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಸದ್ದು ಮಾಡುತ್ತ, ಸಿನಿಮಂದಿಯ ಗಮನ ಸೆಳೆದಿರುವ “ಕೊಡೆ ಮುರುಗ’ ಚಿತ್ರ ಇಂದು ತೆರೆಗೆ ಬರುತ್ತಿದೆ. ಔಟ್‌ ಆ್ಯಂಡ್‌ ಔಟ್‌ ಕಾಮಿಡಿ ಕಥಾಹಂದರ ಹೊಂದಿರುವ “ಕೊಡೆ ಮುರುಗ’ ಚಿತ್ರಕ್ಕೆ ಸುಬ್ರಮಣ್ಯ ಪ್ರಸಾದ್‌ ನಿರ್ದೇಶನವಿದೆ. ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಅಭಿನಯದ “ಮಮ್ಮಿ’ ಚಿತ್ರವನ್ನು ನಿರ್ಮಿಸಿದ್ದ ಕೆ. ರವಿಕುಮಾರ್‌ “ಕೊಡೆ ಮುರುಗ’ನಿಗೆ ಬಂಡವಾಳ ಹೂಡಿದ್ದಾರೆ.

Advertisement

ಈ ಹಿಂದೆ ಕಿರುತೆರೆಯ “ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಖಳನಟನಾಗಿ ಗುರುತಿಸಿಕೊಂಡಿದ್ದ ಮುನಿಕೃಷ್ಣ ಈ ಚಿತ್ರದಲ್ಲಿ ಕೊಡೆ ಮುರುಗನಾಗಿ ಅಭಿನಯಿಸಿದ್ದಾರೆ.

ಉಳಿದಂತೆ ಸುಬ್ರಮಣ್ಯ ಪ್ರಸಾದ್‌, ನಾಯಕಿಯಾಗಿ ಪಲ್ಲವಿ ಗೌಡ, ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌, ಸ್ವಾತಿ, ಅಶೋಕ್‌, ಸ್ವಯಂವರ ಚಂದ್ರು, ತುಮಕೂರು ಮೋಹನ್‌, ಮೋಹನ್‌ ಜುನೇಜಾ ಮೊದಲಾದ ಕಲಾವಿರು ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ವಿಶೇಷ ಹಾಡೊಂದಕ್ಕೆ ನಟ ಲೂಸ್‌ಮಾದ ಯೋಗಿ ಕೂಡ ಹೆಜ್ಜೆ ಹಾಕಿದ್ದಾರೆ.

ಗಾಂಧಿನಗರದಲ್ಲಿ ಸಿನಿಮಾ ಮಾಡುವ ಸಂದರ್ಭದಲ್ಲಿ ಎದುರಾಗುವ ತಾಪತ್ರಯಗಳನ್ನು ಆಧಾರವಾಗಿಟ್ಟುಕೊಂಡು ಅದನ್ನು ಮನರಂಜನಾತ್ಮಕವಾಗಿ ತೆರೆಮೇಲೆ ತಂದಿದ್ದೇವೆ ಎನ್ನುತ್ತದೆ ಚಿತ್ರತಂಡ.

ಇನ್ನು ಈಗಾಗಲೇ ಬಿಡುಗಡೆಯಾಗಿರುವ “ಕೊಡೆ ಮುರುಗ’ ಟ್ರೇಲರ್‌ ಸಿನಿಪ್ರಿಯರು ಮಾತ್ರವಲ್ಲದೆ, ಸಿನಿ ಮಂದಿಯ ಗಮನವನ್ನು ಸೆಳೆಯಲು ಯಶಸ್ವಿಯಾಗಿದೆ. ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಸೇರಿದಂತೆ ಅನೇಕರು “ಕೊಡೆ ಮುರುಗ’ನ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದಾರೆ. ಒಟ್ಟಾರೆ ತನ್ನ ಟೈಟಲ್‌ ಮತು ಟ್ರೇಲರ್‌ ಮೂಲಕ ಸೌಂಡ್‌ ಮಾಡುತ್ತಿರುವ “ಕೊಡೆ ಮುರುಗ’ ಥಿಯೇಟರ್‌ನಲ್ಲಿ ಹೇಗೆಲ್ಲ ರಂಜಿಸುತ್ತಾನೆ ಅನ್ನೋದು ಇಂದು ಗೊತ್ತಾಗಲಿದೆ

Advertisement
Advertisement

Udayavani is now on Telegram. Click here to join our channel and stay updated with the latest news.

Next