Advertisement

ನಗಿಸಲು ‘ಕೊಡೆ ಮುರುಗ’ ರೆಡಿ: ಏ.09 ಬಿಡುಗಡೆ ಪಕ್ಕಾ

02:58 PM Apr 05, 2021 | Team Udayavani |

ಬೆಂಗಳೂರು; ಸರ್ಕಾರ ಶೇ 50 ಸೀಟು ಭರ್ತಿ ನಿರ್ಧಾರ ಪ್ರಕಟಿಸುತ್ತಿದ್ದಂತೆ ಅನೇಕ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದೂಡಿವೆ. ಆದರೆ, “ಕೊಡೆ ಮುರುಗ’ ಚಿತ್ರ ಮಾತ್ರ ಧೈರ್ಯದಿಂದ ಅಂದು ಕೊಂಡಂತೆ ಏ.09ರಂದು ಚಿತ್ರಬಿಡುಗಡೆ ಮಾಡುತ್ತಿದೆ. ಈ ಮೂಲಕ ಸಿನಿಮಾದ ಕಂಟೆಂಟ್‌ ಅನ್ನು ಚಿತ್ರತಂಡ ನಂಬಿದೆ.

Advertisement

ಈಗಾಗಲೇ ಚಿತ್ರದ ಟ್ರೇಲರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದಿದೆ. ಅದರಲ್ಲೂ ಚಿತ್ರದ ಡೈಲಾಗ್‌ ಗಳಿಗೆ ಸಿನಿಮಾ ಪ್ರಿಯರು ಫಿದಾ ಆಗಿದ್ದಾರೆ. ಹೀರೋಯಿಸಂ ಕಥೆಗಳು, ರೆಗ್ಯುಲರ್‌ ಫಾರ್ಮೆಟ್‌ ಕಮರ್ಷಿಯಲ್‌ ಸಿನಿಮಾಗಳನ್ನು ಬಯಸದೇ, ನೈಜತೆಗೆ ಹಾಗೂ ಅನಾವಶ್ಯಕ ಬಿಲ್ಡಪ್‌ ಗಳಿಂದ ಮುಕ್ತವಾಗಿ ಭರಪೂರ ಮನರಂಜನೆ ನೀಡುವ ಸಿನಿಮಾವಾಗಿ “ಕೊಡೆ ಮುರುಗ’ ಪ್ರೇಕ್ಷಕರಿಗೆ ಇಷ್ಟವಾಗಲಿದೆ ಎಂಬ ಮಾತು ಈಗಾಗಲೇ ಗಾಂಧಿ ನಗರದಲ್ಲಿ ಕೇಳಿಬರುತ್ತಿದೆ.

ಗಾಂಧಿನಗರದಲ್ಲಿನ ಕೆಲವು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಅದನ್ನು ಮನರಂಜನೆಯ ಅಂಶವಾಗಿ ಪರಿವರ್ತಿಸಿ ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಮನರಂಜನೆಗೆ ಮೊದಲ ಆದ್ಯತೆ ನೀಡಿರುವುದರಿಂದ ಚಿತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸ ಚಿತ್ರತಂಡದ್ದು.

ಇದನ್ನೂ ಓದಿ:  ಪ್ರೇಕ್ಷಕರ ‘ಸನಿಹಕೆ’ ಬರಲು ಧನ್ಯಾ ರಾಮ್‌ಕುಮಾರ್‌ ಕಾತುರ

ಚಿತ್ರವನ್ನು ಸುಬ್ರಮಣ್ಯ ಪ್ರಸಾದ್‌ ನಿರ್ದೇಶಿಸಿದ್ದಾರೆ. ಕೊರೊನಾ ಭಯದಲ್ಲಿರುವ ಜನರಿಗೆ “ಕೊಡೆ ಮುರುಗ’ ನಗುವಿನ ಔಷಧಿ ನೀಡಲಿದ್ದಾನೆ ಎಂಬ ವಿಶ್ವಾಸ ಚಿತ್ರತಂಡಕ್ಕಿದೆ.

Advertisement

ಚಿತ್ರವನ್ನು ರವಿಕುಮಾರ್‌ ನಿರ್ಮಿಸಿದ್ದಾರೆ. ಇವರಿಗೆ ಅಶೋಕ್‌ ಶಿರಾಲಿ ಸಾಥ್‌ ನೀಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ರವಿಕುಮಾರ್‌, “ಮೊದಲು  ಸುಬ್ರಮಣ್ಯ ಅವರು “ಪ್ರೊಡ್ಯೂಸರ್‌ ಪಿಚ್‌’ ವಿಡಿಯೋ ಮಾಡಿದ್ದರು. ಸಿನಿಮಾ ಹೇಗಿರುತ್ತೋ ಅದೇ ರೀತಿಯ ಅರ್ಧ ಗಂಟೆಯ ವಿಡಿಯೋ ಅದು. ಅದರ ಮೈಕಿಂಗ್‌, ಟೈಮಿಂಗ್‌ ನೋಡಿ ಫಿದಾ ಆಗಿಬಿಟ್ಟೆ. ನಂತರ “ಕೊಡೆ ಮುರುಗ’ ಕೈಗೆತ್ತಿಕೊಂಡೆ. ಅಶೋಕ್‌ ಶಿರಾಲಿ ನನ್ನೊಟ್ಟಿಗೆ ನಿರ್ಮಾಣದಲ್ಲಿ ಸಾಥ್‌ ಕೊಟ್ಟರು’ ಎನ್ನುವುದು ನಿರ್ಮಾಪಕ ರವಿಕುಮಾರ್‌ ಮಾತು.

ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ನಲ್ಲಿ ಸಿನಿಮಾ ನೋಡಿದವರು ನಕ್ಕು ಖುಷಿ ಪಟ್ಟಿರುವುದರಿಂದ ಪ್ರೇಕ್ಷಕ ಕೂಡಾ ಸಿನಿಮಾವನ್ನು ಇಷ್ಟ ಪಡುತ್ತಾರೆ ಎಂಬ ವಿಶ್ವಾಸ ಚಿತ್ರ ತಂಡಕ್ಕಿದೆ. ಚಿತ್ರದಲ್ಲಿ ಅರವಿಂದ ರಾವ್‌, ರಾಕ್‌ಲೈನ್‌ ಸುಧಾಕರ್‌, ಕುರಿ ಪ್ರತಾಪ್‌, ಸ್ವಾತಿ ಗುರುದತ್‌, ಅಶೋಕ್‌, ಸ್ವಯಂವರ ಚಂದ್ರು, ತುಮಕೂರು ಮೋಹನ್‌, ಮೋಹನ್‌ ಜುನೇಜಾ ನಟಿಸಿದ್ದಾರೆ. ಇನ್ನು, ಚಿತ್ರದ ವಿಶೇಷ ಹಾಡೊಂದಕ್ಕೆ “ಲೂಸ್‌ ಮಾದ’ ಯೋಗಿ ಹೆಜ್ಜೆ ಹಾಕಿದ್ದಾರೆ. ಈ ಚಿತ್ರಕ್ಕೆ ರುದ್ರಮುನಿ ಬೆಳಗೆರೆ ಕ್ಯಾಮೆರಾ ಹಿಡಿದಿದ್ದು, ಎಂ.ಎಸ್‌.ತ್ಯಾಗರಾಜ ಸಂಗೀತ ಸಂಯೋಜಿದ್ದಾರೆ.

ಇದನ್ನೂ ಓದಿ:  ಈ ರಾಶಿಯವರಿಗೆ ಅನಿರೀಕ್ಷಿತ ರೀತಿಯಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ಕೈಗೂಡಲಿದೆ: ದಿನಭವಿಷ್ಯ

Advertisement

Udayavani is now on Telegram. Click here to join our channel and stay updated with the latest news.

Next