Advertisement

ಕೊಡಗು, ಕೇರಳದಲ್ಲಿ “ಪ್ರವಾಹ, ಭೂಕುಸಿತದ ಆತಂಕ ಇಲ್ಲ’

11:22 PM May 21, 2023 | Team Udayavani |

ಮಡಿಕೇರಿ: ಪ್ರಸ್ತುತ ವರ್ಷದ ಮಳೆಗಾಲದಲ್ಲಿ ಕೊಡಗು ಮತ್ತು ಕೇರಳ ಪ್ರಾಂತ್ಯದಲ್ಲಿ ಪ್ರವಾಹ ಅಥವಾ ಭೂಕುಸಿತ ಆತಂಕ ಇರುವುದಿಲ್ಲ ಎಂದು ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ ಇಲಾಖೆಯ ನಿವೃತ್ತ ಉಪ ಮಹಾನಿರ್ದೇಶಕ ಡಾ| ಎಚ್‌.ಎಸ್‌.ಎಂ. ಪ್ರಕಾಶ್‌ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

ಜಿಯೋ ಮೀಟರಾಲಜಿ ಅಧ್ಯಯನದ ಆಧಾರದ ಮೇಲೆ ಈ ಬಾರಿ ಸಾಮಾನ್ಯ ಮುಂಗಾರಿಗಿಂತಲೂ ಕಡಿಮೆ ಮಳೆ ಬೀಳುವ ಸಾಧ್ಯತೆ ಇದೆ.
ಭಾರತದ ಸುತ್ತಮುತ್ತಲ ನೆಲದ ಮೇಲಿನ ಹಾಗೂ ಸಮುದ್ರದ ಒಳಗಿನ ಹಲವಾರು ದೊಡ್ಡ ಪ್ರಮಾಣದ ಜ್ವಾಲಾಮುಖೀಗಳು ಸದ್ಯ ನಿಷ್ಕ್ರಿಯವಾಗಿವೆ. ಇದರಿಂದ ಆವಿಯ ಮೂಲಗಳು ಸ್ಥಗಿತವಾಗಿವೆ. 2017ರಿಂದ 3 ವರ್ಷಗಳ ಅವಧಿಯಲ್ಲಿ ಇವುಗಳು ಅತೀ ಹೆಚ್ಚಿನ ಮಟ್ಟದಲ್ಲಿ ಸಕ್ರಿಯವಾಗಿದ್ದವು ಎಂದು ತಿಳಿಸಿದ್ದಾರೆ.

ಸದ್ಯದ ಮಟ್ಟಿನಲ್ಲಿ ಇವುಗಳು ಸಕ್ರಿಯವಾಗುವ ಮುನ್ಸೂಚನೆಗಳು ಕಂಡು ಬರುತ್ತಿಲ್ಲ. ಅದೇ ರೀತಿಯಲ್ಲಿ ಜಾಗತಿಕ ಮಟ್ಟದ ಹಲವು ಜ್ವಾಲಾಮು ಖೀಗಳು ಸದ್ಯದಲ್ಲಿ ನಿಷ್ಕ್ರೀಯವಾಗಿದ್ದು ಉತ್ತರ ಭಾರತ ಸೇರಿದಂತೆ ಎಲ್ಲೆಡೆ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ತುಂಬಾ ಕಡಿಮೆ ಕಂಡು ಬರುತ್ತಿದೆ. ಜುಲೈ ಆಗಸ್ಟ್‌ ನಲ್ಲಿ ಒಂದೆರಡು ಬಾರಿ ಹೆಚ್ಚಿನ ಮಳೆಯಾದರೂ ಒಟ್ಟಾರೆ ಈ ವರ್ಷ ಆತಂಕದ ವಾತಾವರಣ ಉಂಟಾಗುವುದಿಲ್ಲ ಎಂದು ತಿಳಿಸಿದ್ದಾರೆ.

ಜಿಯೋ ಮೀಟರಾಲಜಿ ಅಧ್ಯಯನದ ಆಧಾರದ ಮೇಲೆ ಕಳೆದ ನಾಲ್ಕು ವರ್ಷಗಳಿಂದಲೂ ಕೊಡಗು ಕೇರಳ ಪ್ರಾಂತ್ಯದ ಬಗ್ಗೆ ನಿಖರವಾಗಿ ಮುನ್ಸೂಚನೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next