Advertisement

ಕೊಡಗು ಪ್ರಸ್‌ಕ್ಲಬ್‌ ಅಧ್ಯಕ್ಷರಾಗಿ ಎ.ಆರ್‌. ಕುಟ್ಟಪ್ಪ ಆಯ್ಕೆ

07:10 AM Jul 23, 2017 | Team Udayavani |

ಮಡಿಕೇರಿ: ಕೊಡಗು ಪ್ರಸ್‌ ಕ್ಲಬ್‌ನ 2017-20ನೇ ಸಾಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ನಿರ್ಗಮಿತ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್‌ ಅವರ ಅಕ್ಷತೆಯಲ್ಲಿ ಬುಧವಾರ ಪತ್ರಿಕಾ ಭವನದಲ್ಲಿ ನಡೆದ ನೂತನ ಆಡಳಿತ ಮಂಡಳಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

Advertisement

ಪ್ರಧಾನ ಕಾರ್ಯದರ್ಶಿಯಾಗಿ ಕೆ.ಬಿ. ಮಂಜುನಾಥ್‌, ಹಿರಿಯ ಉಪಾಧ್ಯಕ್ಷರಾಗಿ ವರದಿಗಾರ ಬಿ.ಎಸ್‌. ಲೋಕೇಶ್‌ ಸಾಗರ್‌, ಉಪಾಧ್ಯಕ್ಷರಾಗಿ ಆರ್‌. ಸುಬ್ರಮಣಿ, ಖಜಾಂಚಿಯಾಗಿ ರೆಜಿತ್‌ ಕುಮಾರ್‌ ಗುಹ್ಯ, ಸಂಘಟನಾ ಕಾರ್ಯದರ್ಶಿಯಾಗಿ ಎಂ.ಎ. ಅಜೀಜ್‌, ಸಹ ಕಾರ್ಯದರ್ಶಿಯಾಗಿ ವಿN°àಶ್‌ ಎಂ. ಭೂತನಕಾಡು ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ನೂತನ ಅಧ್ಯಕ್ಷ ಅಜ್ಜಮಾಡ ರಮೇಶ್‌ ಕುಟ್ಟಪ್ಪ ಮಾತನಾಡಿ, ಪ್ರಸ್‌ಕ್ಲಬ್‌ನಲ್ಲಿ ಪ್ರತಿಯೊಬ್ಬ ಸದಸ್ಯರು ಸಕ್ರಿಯವಾಗಿ ಪಾಲ್ಗೊಳ್ಳಲು ಅವಕಾಶ ನೀಡುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗುವುದು. ಸದಸ್ಯರಲ್ಲಿ ಯಾವುದೇ ತಾರತಮ್ಯಕ್ಕೆ ಆಸ್ಪದ ನೀಡದೆ ಸರಿಸಮಾನರಾಗಿ ಕಾಣಲಾಗುವುದು. ಹಿರಿಯರ ಮಾರ್ಗದರ್ಶನದೊಂದಿಗೆ ಪ್ರತಿಯೊಬ್ಬರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಚಟುವಟಿಕೆ ಆಯೋಜಿಸಲಾಗುವುದು ಎಂದರು.

ನಾಮ ನಿರ್ದೇಶಕ ಸದಸ್ಯರಾಗಿ ಎಸ್‌.ಎ. ಮುರುಳೀಧರ್‌, ಎಸ್‌.ಎಂ. ಮುಬಾರಕ್‌, ನಾಗರಾಜ್‌ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು.

ಸಭೆಯಲ್ಲಿ ನಿರ್ದೇಶಕರಾದ ರಫೀಕ್‌ ತೂಚಮಕೇರಿ, ಮನು ಶೆಣೈ, ಎನ್‌.ಎನ್‌. ದಿನೇಶ್‌, ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಬಿ.ಸಿ. ದಿನೇಶ್‌ ಹಾಜರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next