Advertisement
ಮವ್ವಾರು ಷಡಾನನ ಯುವಕ ಸಂಘ ಮತ್ತು ಗ್ರಂಥಾಲಯದ ಆಶ್ರಯದಲ್ಲಿ ನಡೆದ ತಿಂಗಳ ಸರಣಿ ಕಾರ್ಯಕ್ರಮಗಳ ಭಾಗವಾಗಿ ಹಮ್ಮಿಕೊಂಡ “ಮಕ್ಕಳಿಗೆ ಮಧುರ ಗಣಿತ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಸಂದರ್ಭದಲ್ಲಿ ಓದುವ ಹವ್ಯಾಸ ಯುವ ಜನರಲ್ಲಿ ಮರೆಯಾಗುತ್ತಿರುವುದು ಗಂಭೀರ ಪರಿಣಾಮಗಳಿಗೆ ಕಾರಣ ವಾಗಲಿದ್ದು, ಮನೋವಿಕಾಸದ ಹಿನ್ನಡೆಯ ಭೀತಿ ಇದೆ ಎಂದು ಅವರು ಎಚ್ಚರಿಸಿದರು. ಗ್ರಂಥಾಲಯದ ಅಧ್ಯಕ್ಷ ಕೃಷ್ಣಮೂರ್ತಿ ಎಡಪ್ಪಾಡಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕಾರಡ್ಕ ಬ್ಲಾಕ್ ಪಂಚಾಯತ್ ಸದಸ್ಯ ಸುಂದರ ಮವ್ವಾರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಉದಯಗಿರಿ ಶಾಲಾ ಶಿಕ್ಷಕ ರಾಜೇಶ್ ಎಸ್. ಉಬ್ರಂಗಳ ಮಧುರ ಗಣಿತದ ಬಗ್ಗೆ ತರಬೇತಿ ನೀಡಿದರು.
Related Articles
Advertisement
ಸಂಘದ ಉಪಾಧ್ಯಕ್ಷ ಎಂ.ಗಂಗಾಧರ ಮಾಸ್ತರ್ ಸ್ವಾಗತಿಸಿ, ಕಾರ್ಯದರ್ಶಿ ಸದಾಶಿವ ಕೆ. ವಂದಿಸಿದರು. ಜ್ಯೋತಿಲಕ್ಷ್ಮೀ ಹಾಗೂ ವಿದ್ಯಾ ಪ್ರಾರ್ಥನಾಗೀತೆ ಹಾಡಿದರು.