Advertisement

400 ಸ್ಥಾನ ಹೇಗೆ ಗೆಲ್ಲಬೇಕೆಂದು ಗೊತ್ತಿದೆ: ಸುನಿಲ್‌ ಕುಮಾರ್‌

11:42 PM Apr 01, 2024 | Team Udayavani |

ಬೆಂಗಳೂರು: ನಾವು 400 ಸ್ಥಾನ ದಾಟುವ ಗುರಿಯೊಂದಿಗೆ ಕೆಲಸ ಮಾಡುತ್ತಿದ್ದೇವೆ. ಆ ಗುರಿಯನ್ನು ತಲುಪುವುದು ಹೇಗೆ ಎಂಬುದೂ ನಮಗೆ ಗೊತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್‌ ಖಾತೆ ತೆರೆಯಲಿ ನೋಡೋಣ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ. ಸುನಿಲ್‌ ಕುಮಾರ್‌ ಸವಾಲು ಹಾಕಿದರು.

Advertisement

ಪಕ್ಷದ ಮಾಧ್ಯಮ ಕೇಂದ್ರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ 200ಕ್ಕಿಂತ ಹೆಚ್ಚು ಸ್ಥಾನ ಗೆಲುವುದಿಲ್ಲ ಎಂದು ಸಿಎಂ ಹೇಳಿದ್ದಾರೆ. ಜನರೇ ಗೆಲ್ಲಿಸಿಕೊಡುತ್ತಾರೆ. ಆ ಬಗ್ಗೆ ನೀವು ಚಿಂತಿಸಬೇಡಿ. ನೀವು ಕರ್ನಾಟಕದಲ್ಲಿ ಖಾತೆ ತೆರೆದರೂ ಸಾಕು ಎಂದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಗೆದ್ದಿದ್ದ ಏಕೈಕ ಸ್ಥಾನವಾದ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದಲೇ ನಮ್ಮ ನಾಯಕರಾದ ಅಮಿತ್‌ ಶಾ ಮೊದಲ ರೋಡ್‌ ಶೋ ನಡೆಸುತ್ತಿದ್ದಾರೆ. ಎಲ್ಲ ಕ್ಷೇತ್ರಗಳಿಗಿಂತ ಮೊದಲು ಬೆಂಗಳೂರು ಗ್ರಾಮಾಂತರವನ್ನು ನಾವು ಗೆಲ್ಲುತ್ತೇವೆ. ನಮ್ಮ ವಿಜಯ ಅಲ್ಲಿಂದಲೇ ಆರಂಭವಾಗಲಿದೆ. ತೋಡೋ ವಿರುದ್ಧ ಜೋಡೋ ಎಂಬುದೇ ಕರ್ನಾಟಕ ಚುನಾವಣೆಯ ಘೋಷವಾಕ್ಯ ಎಂದು ಹೇಳಿದರು.

 

Advertisement

Udayavani is now on Telegram. Click here to join our channel and stay updated with the latest news.

Next