Advertisement

ಖನ್ನತೆಯಿಂದ ತೆಲುಗು ಸುದ್ದಿ ವಾಚಕಿ ಆತ್ಮಹತ್ಯೆ

07:00 AM Apr 03, 2018 | Team Udayavani |

ಹೈದರಾಬಾದ್‌: ತೆಲುಗು ವಾಹಿನಿಯಲ್ಲಿ ಸುದ್ದಿ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ಅಪಾರ್ಟ್‌ ಮೆಂಟ್‌ನ ಐದನೇ ಮಹಡಿಯಿಂದ ಕೆಳಕ್ಕೆ ಬಿದ್ದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ರಾತ್ರಿ ಸಂಭವಿಸಿದೆ. ಮೃತ ಮಹಿಳೆ ವಿ. ರಾಧಿಕಾ ರೆಡ್ಡಿ(36) ಪತಿ ಜೊತೆಗಿನ ಕೌಟುಂಬಿಕ ಕಲಹಗಳ ಕಾರಣ ಹಲವಾರು ದಿನಗಳಿಂದ ಖನ್ನತೆಗೆ ಒಳಗಾಗಿದ್ದರು. ಕೆಲವು ದಿನಗಳಿಂದ ತಮ್ಮ ಪೋಷಕರ ಜೊತೆ ವಾಸಿಸುತ್ತಿದ್ದರು. ಇವ ರಿಗೆ ಇಬ್ಬರು ಮಕ್ಕಳಿದ್ದಾರೆ.

Advertisement

ಭಾನುವಾರ ರಾತ್ರಿ 10:40ರ ಸುಮಾರಿಗೆ ಕಚೇರಿಯಲ್ಲಿ ರಾತ್ರಿ ನ್ಯೂಸ್‌ ಪ್ರಸಾರದ ವೇಳೆ ಸುದ್ದಿ ಓದಿ ಮುಗಿಸಿ ಬಂದ ಅವರು ಕಟ್ಟಡದ ಕೊನೆಯ ಮಹಡಿಗೆ ತೆರಳಿ ಅಲ್ಲಿಂದ ಹಾರಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಬ್ಯಾಗಿನಲ್ಲಿ “ನನ್ನ ಸಾವಿಗೆ ಯಾರೂ ಕಾರಣರಲ್ಲ. ನನ್ನ ಮನಸ್ಸೇ ನನ್ನ ವೈರಿ ಎಂದು ಬರೆದಿರುವ ಚೀಟಿ ದೊರಕಿದೆ’ ಎಂದು ಪೊಲೀಸರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next