Advertisement

ಪ್ರಾಣಿ ದಯಾ ಕಾರ್ಯಕರ್ತನಿಗೆ ಕೆ.ಎಲ್‌. ರಾಹುಲ್‌ 2 ಲ. ರೂ. ದೇಣಿಗೆ

01:18 AM Jan 25, 2020 | Sriram |

ಮುಂಬಯಿ: ಕ್ರಿಕೆಟಿಗ ಕೆ.ಎಲ್‌. ರಾಹುಲ್‌ ಮೈದಾನದಲ್ಲಿ ಮಾತ್ರವಲ್ಲದೆ ಮೈದಾನದ ಹೊರಗೂ ಜನರ ಮನ ಗೆಲ್ಲುವಂಥ ಕೆಲಸ ಮಾಡಿದ್ದಾರೆ.

Advertisement

ಪ್ರಾಣಿ ದಯಾ ಸಂಘಟನೆಯ ಕಾರ್ಯಕರ್ತ ಶ್ರವಣ್‌ ಕೃಷ್ಣನ್‌ ಎಂಬವರಿಗೆ 2 ಲಕ್ಷ ರೂ. ದೇಣಿಗೆ ಕೊಟ್ಟಿರುವುದು ಈಗ ಭಾರೀ ಸುದ್ದಿಯಾಗಿದೆ.

ಮುಂದಿನ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಾಗ ಸಿಗುವ ಹಣವನ್ನು ಕೊಡುವುದಾಗಿ ಶ್ರವಣ್‌ಗೆ ರಾಹುಲ್‌ ವಾಗ್ಧಾನ ಮಾಡಿದ್ದರು. ಅದರಂತೆ ಜ. 17ರಂದು ಆಸ್ಟ್ರೇಲಿಯ ವಿರುದ್ಧದ ಏಕದಿನ ಪಂದ್ಯದಲ್ಲಿ ರಾಹುಲ್‌ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಈ ಸಂದರ್ಭದಲ್ಲಿ ಲಭಿಸಿದ ಒಂದು ಲಕ್ಷ ರೂ.ಗೆ ಇನ್ನೂ ಒಂದು ಲಕ್ಷ ರೂ. ಸೇರಿಸಿ ಶ್ರವಣ್‌ ಕೃಷ್ಣನ್‌ಗೆ ಕೊಟ್ಟು ಮಾತು ಉಳಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next