Advertisement

ಅಂಪೈರ್ ಜತೆ ಕಿರಿಕ್: ನಿತೀಶ್ ರಾಣಾಗೆ ಸೇರಿ ಎಲ್ಲಾ ಕೆಕೆಆರ್ ಆಟಗಾರರಿಗೆ ದಂಡ

05:28 PM May 15, 2023 | Team Udayavani |

ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ರವಿವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ಕೆಕೆಆರ್ ಪ್ಲೇ ಆಫ್ ರೇಸ್ ಜೀವಂತವಾಗಿರಿಸಿಕೊಂಡಿದೆ.

Advertisement

ಆದರೆ ಈ ಪಂದ್ಯದ ಬಳಿಕ ಕೆಕೆಆರ್ ನಾಯಕ ನಿತೀಶ್ ರಾಣಾ ಅವರಿಗೆ ದಂಡ ವಿಧಿಸಲಾಗಿದೆ. ನಿಧಾನಗತಿಯ ಓವರ್ ರೇಟ್ ಗಾಗಿ ರಾಣಾಗೆ ಐಪಿಎಲ್ ಮಂಡಳಿ ದಂಡ ವಿಧಿಸಿದೆ.

“ಮೇ 14 ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯದಲ್ಲಿ ತಮ್ಮ ತಂಡವು ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ನಿತೀಶ್ ರಾಣಾ ಅವರಿಗೆ ದಂಡ ವಿಧಿಸಲಾಗಿದೆ” ಎಂದು ಐಪಿಎಲ್ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಕುಡಿದ ಮತ್ತಿನಲ್ಲಿ ಗಗನಸಖಿಯೊಂದಿಗೆ ಅಸಭ್ಯ ವರ್ತನೆ: ವ್ಯಕ್ತಿ ಪೊಲೀಸರ ವಶಕ್ಕೆ

ಈ ಸೀಸನ್ ನಲ್ಲಿ ಎರಡನೇ ಬಾರಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣದಿಂದ ನಿತೀಶ್ ರಾಣಾಗೆ 25 ಲಕ್ಷ ರೂ ಮತ್ತು ಇಂಪ್ಯಾಕ್ಟ್ ಆಟಗಾರ ಸೇರಿದಂತೆ ಆಡುವ ಬಳಗದ ಪ್ರತಿಯೊಬ್ಬ ಸದಸ್ಯನಿಗೆ ರೂ. 6 ಲಕ್ಷ ಅಥವಾ ಪಂದ್ಯದ ಶುಲ್ಕದ ಶೇಕಡಾ 25 (ಯಾವುದು ಕಡಿಮೆಯೋ ಅದು) ರಷ್ಟು ದಂಡ ವಿಧಿಸಲಾಗಿದೆ.

Advertisement

ಸಿಎಸ್ ಕೆ ಬ್ಯಾಟಿಂಗ್ ನ 20ನೇ ಓವರ್ ವೇಳೆ ಕೆಕೆಆರ್ ನಿಗದಿತ ಸಮಯಕ್ಕಿಂತ ಹಿಂದಿರುವುದನ್ನು ಅಂಪೈರ್ ಗಳು ರಾಣಾಗೆ ಸೂಚಿಸಿದರು. ಈ ವೇಳೆ ನಿತೀಶ್ ರಾಣಾ ಅಂಪೈರ್ ಗಳ ಜತೆ ವಾಗ್ವಾದ ನಡೆಸಿದ ಪ್ರಸಂಗ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next