Advertisement

ಬಂಟ್ಸ್‌ ಸೆಂಟರ್‌: ಸಂಗೀತ ಕಲಾವಿದ  ಕಿಶೋರ್‌ ಕುಮಾರ್‌  ಜನ್ಮದಿನಾಚರಣೆ

02:47 PM Aug 12, 2018 | Team Udayavani |

ಮುಂಬಯಿ: ದ ಪೀಪಲ್ಸ್‌ ಆರ್ಟ್‌ ಸೆಂಟರ್‌ ಮುಂಬಯಿ ಸಂಸ್ಥೆಯು ನವಿ ಮುಂಬಯಿ  ಜೂಯಿ ನಗರದ ಬಂಟ್ಸ್‌ ಸೆಂಟರ್‌ನ ಸೌಮ್ಯಲತಾ ಸದಾನಂದ ಶೆಟ್ಟಿ ಸಭಾಗೃಹದಲ್ಲಿ ಸಂಗೀತಕಾರ ಸ್ವರ್ಗೀಯ ಕಿಶೋರ್‌ ಕುಮಾರ್‌ ಅವರ 89ನೇ ಜನ್ಮೋತ್ಸವದ ಪ್ರಯುಕ್ತ “ಚಿರಂತನ ಕಿಶೋರ್‌ ಕುಮಾರ್‌’ ಸಂಗೀತ ಕಾರ್ಯಕ್ರಮ ಆಯೋಜಿಸಿತ್ತು.

Advertisement

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಫೆಡರೇಶನ್‌ ಆಫ್‌ ಹೊಟೇಲ್‌ ಆ್ಯಂಡ್‌ ರೆಸ್ಟೋರೆಂಟ್‌ ಅಸೋಸಿಯೇಶನ್‌ಸ್‌ ಮಹಾರಾಷ್ಟ್ರ ಇದರ ಉಪಾಧ್ಯಕ್ಷ, ಮಹಾರಾಷ್ಟ್ರ ರಾಜ್ಯ ಸರಕಾರದ ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ ವಿರಾರ್‌ ಶಂಕರ್‌ ಬಿ. ಶೆಟ್ಟಿ ಉಪಸ್ಥಿತರಿದ್ದು ಪ್ರಧಾನ ಅಭ್ಯಾಗತರಾಗಿದ್ದ ನವಿ ಮುಂಬಯಿ ಮಹಾನಗರ ಪಾಲಿಕೆಯ ಆಯುಕ್ತ ಐಎಎಸ್‌ ಅಧಿಕಾರಿ ಡಾ| ರಾಮಸ್ವಾಮಿ  ಎನ್‌. ಅವರನ್ನು ಸಮ್ಮಾನಿಸಿ ಅಭಿನಂದಿಸಿದರು.

ಈ ಸಂದರ್ಭ ವೇದಿಕೆಯಲ್ಲಿ ಅಖೀಲ ಭಾರತ ಮರಾಠಿ ಚಿತ್ರಪದ್‌ ಮಹಾ ಮಂಡಲದ ಮಾಜಿ ಅಧ್ಯಕ್ಷ ವಿಜಯ್‌ ಕೋಂಡೆR ಉಪಸ್ಥಿತರಿದ್ದರು. ಪೀಪಲ್ಸ್‌ ಆರ್ಟ್‌ ಸೆಂಟರ್‌ ಇದರ ಕಾರ್ಯದರ್ಶಿ ಗೋಪ್‌ಕುಮಾರ್‌ ಕೃಷ್ಣ ಪಿಳ್ಳೈ ಸ್ವಾಗತಿಸಿದರು. ಡಾ| ಕೆ. ಸತೀಶನ್‌ ಪುರಸ್ಕೃತರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿ, ಕಿಶೋರ್‌ ಕುಮಾರ್‌ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next