Advertisement

ಕಿನ್ನಿಗೋಳಿ: ನಳಿನ್‌ರಿಂದ ಚುನಾವಣೆ ಪ್ರಚಾರ

09:10 PM Apr 11, 2019 | Team Udayavani |

ಕಿನ್ನಿಗೋಳಿ: ಕೇಂದ್ರದಲ್ಲಿ ಮೋದಿ ಸರಕಾರದ ಜನಪರ ಯೋಜನೆಗಳಿಂದ ಹಳ್ಳಿ ಹಳ್ಳಿಗಳಲ್ಲಿಯೂ ಇಂದು ಬಿಜೆಪಿ ಅಲೆ ಬೀಸುತ್ತಿದೆ. ಎಲ್ಲ ಕಡೆಗಳಲ್ಲಿಯೂ ಜನ ಬಿಜೆಪಿಗೆ ಆಶೀರ್ವಾದಿಸಲು ತಯಾರಾಗಿದ್ದಾರೆ ಎಂದು ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ನಳಿನ್‌ ಕುಮಾರ್‌ ಕಟೀಲು ಹೇಳಿದರು.

Advertisement

ಕಿನ್ನಿಗೋಳಿಯ ರಾಜಾಂಗಣದಿಂದ ಮಾರುಕಟ್ಟೆ ತನಕ ಚುನಾವಣೆ ರ್ಯಾಲಿ ನಂತರ ಅವರು ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ಮೂರು ಸುತ್ತಿನ ಪ್ರವಾಸ ಮುಗಿಸಿದ್ದೇವೆ. ಸಂಪೂರ್ಣವಾದ ಜನ ಬೆಂಬಲ ಕಂಡು ಬಂದಿದೆ. ಈ ಬಾರಿ ಸುಮಾರು ಎರಡು ಲಕ್ಷ ಮತಗಳ ಅಂತರದಲ್ಲಿ ಜಯಗಳಿಸುವ ಎಂಬ ವಿಶ್ವಾಸ ಇದೆ ಎಂದರು.

ಈ ಸಂದರ್ಭ ಶಾಸಕ ಉಮಾನಾಥ ಕೋಟ್ಯಾನ್‌, ಮಂಡಲಾಧ್ಯಕ್ಷ ಈಶ್ವರ್‌ ಕಟೀಲು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಭುವನಾಭಿರಾಮ ಉಡುಪ, ದೇವಪ್ರಸಾದ್‌ ಪುನರೂರು,ಅಭಿಲಾಷ್‌ ಶೆಟ್ಟಿ, ಮೊದಲಾದವರು ಉಪ ಸ್ಥಿತರಿದ್ದರು.ಮೂಲ್ಕಿ ಹೋಬಳಿಯ ಕೆ.ಎಸ್‌.ರಾವ್‌ ನಗರ,ಪುನರೂರು, ಏಳಿಂಜೆ, ಹಳೆಯಂಗಡಿ,
ಕಿನ್ನಿಗೋಳಿ, ಸಸಿಹಿತ್ಲು ಮತ್ತಿತರ ಕಡೆಗಳಲ್ಲಿ ಚುನಾವಣಾ ಪ್ರಚಾರ ನಡೆಸಿದರು. ನೂರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next