Advertisement

ಗಲಾಟೆ ಮಾಡಬೇಡ ಎಂದಿದ್ದಕ್ಕೆ ಕೊಂದ, ಬಳಿಕ ನೇಣಿಗೆ ಶರಣಾದ

10:44 PM Apr 28, 2019 | Team Udayavani |

ನರೇಗಲ್ಲ: ಕುಡಿದು ಗಲಾಟೆ ಮಾಡಿದರೆ ಪೊಲೀಸರಿಗೆ ಹೇಳುತ್ತೇನೆ ಎಂದ ವಿದ್ಯಾರ್ಥಿಯನ್ನು ಕೊಲೆ ಮಾಡಿದ ಯುವಕ, ಬಳಿಕ ತಾನೂ ನೇಣಿಗೆ ಶರಣಾದ ಘಟನೆ ಸಮೀಪದ ಜಕ್ಕಲಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಗ್ರಾಮದ ನಿವಾಸಿ ವಿಕಾಸ ಶೇಖಪ್ಪ ದೊಡ್ಡಮೇಟಿ (18) ಕೊಲೆಯಾದ ಯುವಕ.

Advertisement

ಶೌಕತ್‌ಅಲಿ ಮಾಬುಸಾಬ ಕೊಪ್ಪಳ (35) ಕೊಲೆ ಮಾಡಿ ನೇಣಿಗೆ ಶರಣಾಗಿದ್ದಾನೆ. ಜಕ್ಕಲಿ ಗ್ರಾಮದ ಯುವಕ ವಿಕಾಸ ದೊಡ್ಡಮೇಟಿ ದ್ವಿತೀಯ ಪಿಯು ಮುಗಿಸಿ, ಸಿಇಟಿ ಪರೀಕ್ಷೆಗಾಗಿ ಅಧ್ಯಯನ ಮಾಡುತ್ತಿದ್ದ. ವಿಕಾಸ ಮನೆ ಹತ್ತಿರ ಕೊಲೆಗಾರ ಶೌಕತ್‌ ಅಲಿ ಪ್ರತಿದಿನ ಕುಡಿದು ಗಲಾಟೆ ಮಾಡುತ್ತಿದ್ದ. ಶನಿವಾರ ರಾತ್ರಿ ಕೂಡ ಗಲಾಟೆ ಮಾಡುತ್ತಿದ್ದ.

ಇದೇ ರೀತಿ ಗಲಾಟೆ ಮಾಡಿದರೆ ನಿಮ್ಮ ವಿಡಿಯೋ ಮಾಡಿ ಪೊಲೀಸ್‌ ಠಾಣೆಗೆ ದೂರು ನೀಡುತ್ತೇನೆ ಎಂದು ವಿಕಾಸ ಎಚ್ಚರಿಸಿದ್ದ. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡ ಶೌಕತ್‌ ಅಲಿ, ಭಾನುವಾರ ಬೆಳಗ್ಗೆ ವಿಕಾಸ ಬಹಿರ್ದೆಸೆಗೆ ಹೋಗಿದ್ದಾಗ ಆತನನ್ನು ಹಿಂಬಾಲಿಸಿ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ.

ಗ್ರಾಮಸ್ಥರಿಗೆ ವಿಷಯ ತಿಳಿಯುತ್ತಿದ್ದಂತೆ ಶೌಕತ್‌ ಅಲಿ ಓಡಿ ಹೋಗಿ ಎರಡು ಕಿ.ಮೀ. ದೂರದ ಜಮೀನೊಂದರಲ್ಲಿ ಭಯದಿಂದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ನರೇಗಲ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next