Advertisement

ದ್ವೇಷದಿಂದ ಆಟೋಕ್ಕೆ ಟಿಪ್ಪರ್‌ ಢಿಕ್ಕಿ ಹೊಡೆಸಿ ಹತ್ಯೆ; ದೂರು

11:37 PM Nov 29, 2023 | Team Udayavani |

ಹೊನ್ನಾವರ: ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಆದ ಗಲಾಟೆ ಯಿಂದ ಆಟೋದಲ್ಲಿ ಕುಳಿತಿದ್ದ ಮೂವರ ಮೇಲೆ ಟಿಪ್ಪರ್‌ ಢಿಕ್ಕಿ ಹೊಡೆಸಿದ ಪರಿಣಾಮ ಓರ್ವ ಮೃತಪಟ್ಟು ಮತ್ತಿಬ್ಬರು ಗಾಯಗೊಂಡ ಘಟನೆ ತಾಲೂಕಿನ ಅರೇಅಂಗಡಿ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

Advertisement

ಟಿಪ್ಪರ್‌ ಹಾಯಿಸಿದ್ದರಿಂದ ತಲೆಗೆ ಗಂಭೀರವಾಗಿ ಪೆಟ್ಟುಬಿದ್ದು ಆಟೋ ಚಾಲಕ ಓಲ್ವಿನ್‌ ಸ್ಥಳದಲ್ಲೇ ಮೃತಪಟ್ಟಿದ್ದು, ವಸಂತ ಹಾಗೂ ಜನಾರ್ದನರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಮಧ್ಯಾಹ್ನ ಆರೊಳ್ಳಿಯಲ್ಲಿ ಹಡಿನಬಾಳದ ವಿನಾಯಕ ನಾರಾಯಣ ಭಟ್‌ ಮತ್ತು ಜನಾರ್ದನ ಕೇಶವ ನಾಯ್ಕ ಮಧ್ಯೆ ಹಣದ ವ್ಯವಹಾರಕ್ಕೆ ಸಂಬಂಧಿಸಿ ಜಗಳ ನಡೆದಿತ್ತು. ಅನಂತರ ಇದೇ ದ್ವೇಷದಿಂದ ಅರೇಅಂಗಡಿಯ ಜನತಾ ಕಾಲನಿ ಹತ್ತಿರ ಜನಾರ್ದನ ನಾಯ್ಕ ಹಾಗೂ ಸ್ನೇಹಿತರಾದ ವಸಂತ ನಾಯ್ಕ, ಓಲ್ವಿನ್‌ ಲೋಬೊ ಆಟೋದಲ್ಲಿ ಕುಳಿತಿದ್ದ ವೇಳೆ ಇವರನ್ನು ಕೊಲೆ ಮಾಡುವ ಉದ್ದೇಶದಿಂದ ವಿನಾಯಕ ನಾರಾಯಣ ಭಟ್‌ ಟಿಪ್ಪರ್‌ ಚಲಾಯಿಸಿಕೊಂಡು ಬಂದು ಆಟೋಕ್ಕೆ ಢಿಕ್ಕಿ ಹೊಡೆಸಿದ್ದಾನೆ ಎಂದು ವಿನಾಯಕ ಭಟ್‌ ವಿರುದ್ದ ವಸಂತ ನಾಯ್ಕ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next