Advertisement

ಯುವಕನ ಅಪಹರಿಸಿ ಬೆದರಿಸಿ ಎಟಿಎಂನಿಂದ ಹಣ ಡ್ರಾ : ಮೂವರ ಬಂಧನ

08:13 PM Sep 25, 2022 | Team Udayavani |

ಪಣಜಿ: 19 ವರ್ಷದ ಯುವಕನನ್ನು ಅಪಹರಿಸಿ ಕೊಲೆ ಬೆದರಿಕೆ ಹಾಕಿದ್ದಲ್ಲದೆ, ಆತನ ಎಟಿಎಂನಿಂದ ಬಲವಂತವಾಗಿ ಹಣ ಡ್ರಾ ಮಾಡಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ  ಓಲ್ಡ್ ಗೋವಾ ಪೊಲೀಸರು ಕೇವಲ ಎರಡು ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಿಸುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರಿಂದ ಲಭ್ಯವಾಗಿರುವ ಮಾಹಿತಿಯ ಅನುಸಾರ, ಪಣಜಿ ಸಮೀಪದ ರಾಯಬಂದರಿ ನಿಂದ ಸಂಜಯ್ ಗುಪ್ತಾ ಎಂಬಾತನನ್ನು ಅಪಹರಿಸಲಾಗಿತ್ತು. ಸಂಜಯ್ ಗುಪ್ತಾನನ್ನು ರಾಯಬಂದರ್ ನಿಂದ ಪಣಜಿ ಸಮೀಪದ ತಾಲಿಗಾಂವ್ ಗೆ ಕರೆದೊಯ್ದು ಆತನ  ಎಟಿಎಂನಿಂದ ಆರೋಪಿಗಳು ಬಲವಂತವಾಗಿ ಹಣವನ್ನು ಡ್ರಾ ಮಾಡಿಸಿದ್ದರು. ಆರೋಪಿಗಳು ಸಂಜಯ್ ಗುಪ್ತಾಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ.

ಪೊಲೀಸರು ಬಿಜೇಂದ್ರ ಶಿವಾರ್ಥನ್ ಪ್ರಸಾದ್, ಅಮನ್ ರಫೀಕ್ ನದಾಫ್ ಮತ್ತು ರಂಜಿತ್ ನಿರ್ಮಲ್ ಚೌಹಾಣ್ ಎನ್ನುವ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕಣಕ್ಕೆ ಸಂಬಂಧಿಸಿದಂತೆ  ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next